Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರ, ಮೋದಿ ಟೀಕಿಸಿದ ಮಹೇಶ್ಚಂದ್ರಗುರುನಾ ವಜಾ ಮಾಡಿ: ಶೋಭಾ ಕರಂದ್ಲಾಜೆ

ಕೇಂದ್ರ ಸರ್ಕಾರ, ಮೋದಿ ಟೀಕಿಸಿದ ಮಹೇಶ್ಚಂದ್ರಗುರುನಾ ವಜಾ ಮಾಡಿ: ಶೋಭಾ ಕರಂದ್ಲಾಜೆ
ಬೆಂಗಳೂರು , ಮಂಗಳವಾರ, 27 ಜೂನ್ 2017 (13:18 IST)
ಮೈಸೂರಿನ ಕಲಾಮಂದಿರದಲ್ಲಿ ಗೋಮಾಂಸ ಸೇವಿಸಿದ್ದಲ್ಲದೇ ಕೇಂದ್ರ ಸರ್ಕಾರ, ಮೋದಿ ಟೀಕಿಸಿದ ಮಹೇಶ್ಚಂದ್ರಗುರು ಅವರನ್ನು ವಜಾ ಮಾಡುವಂತೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
 
ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪತ್ರ ಬರೆದ ಕರಂದ್ಲಾಜೆ, ಸರಕಾರಿ ಸೇವೆಯಲ್ಲಿರುವವರು ಸರಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವಿಸಿರುವುದು ನಿಜಕ್ಕೂ ನಾಚಿಕೆ ತರುವಂತಹ ಸಂಗತಿ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಒತ್ತಾಯಿಸಿದ್ದಾರೆ.
 
ಪ್ರೊ.ಕೆ.ಎಸ್.ಭಗವಾನ್, ಪ್ರೊ.ಮಹೇಶ್‌ಚಂದ್ರಗುರು ಸೇರಿದಂತೆ ಅನೇಕ ಸಾಹಿತಿಗಳು ಕಲಾಭವನದಲ್ಲಿ ಗೋಮಾಂಸ ಸೇವಿಸಿದ್ದಲ್ಲದೇ ಇಂದು ತಿನ್ನುತ್ತೇವೆ. ನಾಳೆ ತಿನ್ನುತ್ತೇವೆ. ಮುಂದೆಯೂ ತಿನ್ನುತ್ತೇವೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು.
 
ಬಿಜೆಪಿ ಶಾಸಕ ಸಿ.ಟಿ.ರವಿ ಕೂಡಾ ಹೆಂಡತಿ ಮತ್ತು ತಾಯಿ ಮಧ್ಯದ ವ್ಯತ್ಯಾಸ ಗೊತ್ತಿಲ್ಲದವರು ಇಂತಹ ಕೃತ್ಯಗಳಲ್ಲಿ ತೊಡುಗುತ್ತಾರೆ ಎಂದು ಟೀಕಿಸಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಗೋಮಾಂಸ ತಿನ್ನುವುದಾದರೇ ಮನೆಯಲ್ಲಿಯೇ ತಿಂದು ಸಾಯಲಿ ಎಂದು ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 2 ರಂದು ನನ್ನ ಪಕ್ಷದ ಬಣ್ಣ ಕೇಸರಿಯೋ, ಹಸಿರೋ ಗೊತ್ತಾಗಲಿದೆ: ಎಚ್.ವಿಶ್ವನಾಥ್