Select Your Language

Notifications

webdunia
webdunia
webdunia
webdunia

ಜುಲೈ 2 ರಂದು ನನ್ನ ಪಕ್ಷದ ಬಣ್ಣ ಕೇಸರಿಯೋ, ಹಸಿರೋ ಗೊತ್ತಾಗಲಿದೆ: ಎಚ್.ವಿಶ್ವನಾಥ್

ಜುಲೈ 2 ರಂದು ನನ್ನ ಪಕ್ಷದ ಬಣ್ಣ ಕೇಸರಿಯೋ, ಹಸಿರೋ ಗೊತ್ತಾಗಲಿದೆ: ಎಚ್.ವಿಶ್ವನಾಥ್
ಮೈಸೂರು , ಮಂಗಳವಾರ, 27 ಜೂನ್ 2017 (12:54 IST)
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಇತರ ಪಕ್ಷಗಳ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲು ಆಹ್ವಾನಿಸುತ್ತಿದ್ದಾರೆ. ಜುಲೈ 2 ರಂದು ಯಾವ  ಬಸ್ ಹತ್ತುತ್ತೇನೆ. ಬಸ್‌ನ ಬಣ್ಣ ಕೇಸರಿಯೋ, ಹಸಿರೋ ಗೊತ್ತಾಗಲಿದೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ.  
 
ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಆದರೆ, ಯಾವ ಪಕ್ಷ ಸೇರಬೇಕು ಎನ್ನುವ ಬಗ್ಗೆ ತೀರ್ಮಾನವಾಗಿಲ್ಲ. ಜುಲೈ 2 ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವೈಫಲ್ಯಗಳು, ದುರಾಡಳಿತದ ಬಗ್ಗೆ ಮತ್ತೊಂದು ಪುಸ್ತಕ ಹೊರತರಲು ನಿರ್ಧರಿಸಿದ್ದೇನೆ. ಕಳೆದ ಮೂರು ತಿಂಗಳುಗಳ ಬೆಳವಣಿಗೆಗಳು ಪುಸ್ತಕದಲ್ಲಿ ದಾಖಲಿಸುತ್ತೇನೆ ಎಂದಿದ್ದಾರೆ.
 
ಕಾಂಗ್ರೆಸ್ ಪಕ್ಷದ ಸರಕಾರದ ಬೇಜವಾಬ್ದಾರಿ ಅಡಳಿತವನ್ನು ರಾಜ್ಯದ ಜನತೆ ನೋಡಿದ್ದಾರೆ. ಭ್ರಷ್ಟಾಚಾರವನ್ನು ದೂರವಿಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ, ಭ್ರಷ್ಟಾಚಾರವನ್ನೇ ಹೊದ್ದು ಮಲಗಿದೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ಲಾಮಿಕ್ ಉಗ್ರವಾದವನ್ನು ಧ್ವಂಸಗೊಳಿಸುತ್ತೇವೆ: ಟ್ರಂಪ್