ಠಾಣೆ ಪ್ರದೇಶದಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ರವೀಂದ್ರ ಚವ್ಹಾಣ್, ದಲಿತರನ್ನು ಹಂದಿಗೆ ಹೋಲಿಸುವ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಕೋಲಾಹಲ ಮೂಡಿಸಿದ್ದರೆ, ದಲಿತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕ ದಲಿತರನ್ನು ಹಂದಿಗಳಿಗೆ ಹೋಲಿಸುತ್ತಿರುವ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಶಾಸಕ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎನ್ನುವ ಒತ್ತಡವನ್ನು ವಿಪಕ್ಷಗಳು ಹೇರುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಲಿತರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಶಾಸಕರು ಹೇಳಿದರಾದರೂ ದಲಿತರನ್ನು ಹಂದಿಗೆ ಹೋಲಿಸಿರುವುದು ಸಭೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಎನ್ಸಿಪಿ ಪಕ್ಷದ ಮುಖಂಡರು ಹಂದಿಗೆ ನಾಮಕಾರಣ ಕಾರ್ಯಕ್ರಮ ಮಾಡಿ ಅದಕ್ಕೆ ಬಿಜೆಪಿ ಶಾಸಕ ರವೀಂದ್ರ ಚೌಹಾನ್ ಅಲರ ಹೆಸರಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ರವೀಂದ್ರ ಚೌಹಾನ್ ಅವರನ್ನು ಸಂಪರ್ಕಿಸಲು ಹಲವು ಮಾಧ್ಯಮಗಳ ವರದಿಗಾರರು ನಿರಂತರವಾಗಿ ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ