Select Your Language

Notifications

webdunia
webdunia
webdunia
webdunia

ಬಿಎಸ್ ವೈ ಪುತ್ರನ ವಿರುದ್ಧ ಗೆಲ್ಲಲು ಮಧು ಬಂಗಾರಪ್ಪಗೆ ಅಸ್ತ್ರ ನೀಡಿದ ದೇವೇಗೌಡರು

ಬಿಎಸ್ ವೈ ಪುತ್ರನ ವಿರುದ್ಧ ಗೆಲ್ಲಲು ಮಧು ಬಂಗಾರಪ್ಪಗೆ ಅಸ್ತ್ರ ನೀಡಿದ ದೇವೇಗೌಡರು
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (10:54 IST)
ಬೆಂಗಳೂರು: ಲೋಕಸಭೆ ಉಪಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಪರವಾಗಿ ಮಧು ಬಂಗಾರಪ್ಪ ಸ್ಪರ್ಧೆ ಖಚಿತವಾಗಿದೆ.

ಮಧು ಬಂಗಾರಪ್ಪ ನಿನ್ನೆಯಷ್ಟೇ ವಿದೇಶದಿಂದ ವಾಪಸಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತರಾತುರಿ ನಿರ್ಧಾರ ಮಾಡುವುದು ಸರಿಯಲ್ಲ ಎಂಬ ಯೋಚನೆಯಲ್ಲಿದ್ದರು. ಹೀಗಾಗಿ ನಾಮಪತ್ರ ಸಲ್ಲಿಕೆ ಮಾಡುವ ಮೊದಲು ಪಕ್ಷದ ವರಿಷ್ಠ ದೇವೇಗೌಡರನ್ನು ಭೇಟಿಯಾಗಲು ನಿರ್ಧರಿಸಿದ್ದರು.

ಅದರಂತೆ ಬೆಳ್ಳಂ ಬೆಳಿಗ್ಗೆಯೇ ದೇವೇಗೌಡರನ್ನು ಭೇಟಿಯಾದ ಮಧು ಬಂಗಾರಪ್ಪ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಗೆಲ್ಲುವಂತೆ ಸಲಹೆ ನೀಡಿ ದೇವೇಗೌಡರು ಮಧು ಬಂಗಾರಪ್ಪಗೆ ಬಿ ಫಾರಂ ನೀಡಿದ್ದಾರೆ. ಹೀಗಾಗಿ ಮಧು ಬಂಗಾರಪ್ಪ ಸ್ಪರ್ಧೆ ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯತಮೆ ಮನೆಗೆ ಹೋಗಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ!