Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನ ಒಲಿದು ಬಂದಿರುವುದಕ್ಕೆ ನನಗೆ ಸಂತಸ ತಂದಿದೆ: ಶಾಸಕ ಎಂ.ಕಷ್ಣಪ್ಪ ಹೇಳಿಕೆ

ಸಚಿವ ಸ್ಥಾನ ಒಲಿದು ಬಂದಿರುವುದಕ್ಕೆ ನನಗೆ ಸಂತಸ ತಂದಿದೆ: ಶಾಸಕ ಎಂ.ಕಷ್ಣಪ್ಪ ಹೇಳಿಕೆ
ಬೆಂಗಳೂರು , ಸೋಮವಾರ, 5 ಸೆಪ್ಟಂಬರ್ 2016 (11:23 IST)
ಸಚಿವ ಸ್ಥಾನ ಒಲಿದು ಬಂದಿರುವುದು ನನಗೆ ಸಂತಸ ತಂದಿದೆ, ಇದಕ್ಕೆಲ್ಲಾ ದೇವರ ಆಶೀರ್ವಾದ ಹಾಗೂ ಪಕ್ಷದ ಮುಖಂಡರ ಸಹಕಾರವೇ ಕಾರಣ ಎಂದು ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ..  


ಶಾಸಕನಾಗಿದ್ದಾಗಲೂ ಪ್ರತಿ ದಿನ ನನಗೆ ಸವಾಲಾಗಿತ್ತು. ಹಟ್ಟಿನಿಂದಲೇ ಯಾರು ಎಲ್ಲವನ್ನು ಕಲಿತು ಬಂದಿರಲ್ಲ, ನಾನು ಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ.  ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.

ಮಂತ್ರಿ ಸ್ಥಾನ ದೊರೆಯುವುದಕ್ಕೆ ದೇವರ ಆಶೀರ್ವಾದ, ಪಕ್ಷದ ಮುಖಂಡರ ಸಹಕಾರವಿದೆ. ಬೇರೆ ಬೇರೆ ಕಾರಣಗಳಿಂದ ಕಾಲ ಕೂಡಿ ಬಂದಿರಲಿಲ್ಲ ಅಷ್ಟೇ. ಸಚಿವನಾಗುವುದನ್ನೂ ಈ ಹಿಂದೆ ಯಾರೂ ತಪ್ಪಿಸಲ್ಲ, ಮುಂದೆಯೂ ಯಾರಿಂದಲೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದರು. 

ಇನ್ನೂ ಇದೇ ವೇಳೆ ಮಾತನಾಡಿದ ಅವರು ಈ ಹಿಂದೆ ಆಗಿರುವುದರ ಕುರಿತು ನಾನು ಚಿಂತೆ ಮಾಡುವುದಿಲ್ಲ. ಖಾತೆಯ ಬಗ್ಗೆ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ರಾಜ್ಯದ ಜನತೆಗೆ ಉತ್ತಮ ಕೆಲಸ ಮಾಡಿ ತೋರಿಸುವೆ. ಮುಂದೆ ಆಗಬೇಕಾಗಿರುವುದರ ಬಗ್ಗೆ ಯೋಚನೆ ಮಾಡುತ್ತೇನೆ ,ಯಾವ ಖಾತೆ ಕೊಟ್ಟರು ಸಮರ್ಥವಾಗಿ ನಿರ್ಹಹಿಸುತ್ತೇನೆ ಎಂದು ಶಾಸಕ ಎಂ.ಕೃಷ್ಣಪ್ಪ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ: ಕೆಆರ್‌ಎಸ್ ಡ್ಯಾಂ ಸುತ್ತ ಭಾರೀ ಬಿಗಿ ಪೊಲೀಸ್ ಭದ್ರತೆ