Select Your Language

Notifications

webdunia
webdunia
webdunia
webdunia

ಸೀರೆಯಲ್ಲಿ ಮರಕ್ಕೆ ನೇಣುಬಿಗಿದುಕೊಂಡ ಪ್ರೇಮಿಗಳು!

ಸೀರೆಯಲ್ಲಿ ಮರಕ್ಕೆ ನೇಣುಬಿಗಿದುಕೊಂಡ ಪ್ರೇಮಿಗಳು!
ರಾಯಚೂರು , ಶನಿವಾರ, 23 ಏಪ್ರಿಲ್ 2022 (14:17 IST)
ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್-3ರ ಹೊರವಲಯದಲ್ಲಿ ಪ್ರೇಮಿಗಳಿಬ್ಬರು ಒಂದೇ ಸೀರೆಯಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಲವ್ ಸರ್ಕಾರ್ ಹಾಗೂ ಕರೀನಾ ಮೃತ ಪ್ರೇಮಿಗಳು. ಲವ್ ಸರ್ಕಾರ್ಗೆ ಎರಡು ತಿಂಗಳ ಹಿಂದೆ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಿತ್ತು. ಲವ್ ಸರ್ಕಾರ ಬೇರೆ ಯುವತಿಯ ಜೊತೆ ಮದುವೆ ಆಗಿದ್ದಕ್ಕೆ ಕರೀನಾ ಮನನೊಂದಿದ್ದಳು. 

ಇತ್ತ ಕರೀನಾಳನ್ನೂ ಬಿಟ್ಟಿರಲಾಗದ ಸ್ಥಿತಿಯಲ್ಲಿದ್ದ ಲವ್ ಸರ್ಕಾರ ಮಾನಸಿಕವಾಗಿ ಕುಗ್ಗಿದ್ದ. ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ಮನನೊಂದು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಹಿನ್ನೆಲೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಐಡಿ ತನಿಖೆ : ಪಿಎಸ್ಐ ಹುದ್ದೆಗಳ ಪರೀಕ್ಷೆ