Webdunia - Bharat's app for daily news and videos

Install App

ಲವ್ ಕ್ಯಾಸ್ಟ್ ದೋಖಾ...

Webdunia
ಮಂಗಳವಾರ, 3 ಜುಲೈ 2018 (18:37 IST)
ಅವರಿಬ್ಬರದ್ದು 5 ವರ್ಷಗಳ ಲವ್‌ ಕಹಾನಿ..ಆ ಪ್ರೇಮಲೋಕದಲ್ಲಿ ಹದಿಹರೆಯದ ಹುಡುಗ,ಹುಡುಗಿ ಜೀವನದ ಕನಸ್ಸನ್ನ ಕಟ್ಟಿಕೊಂಡಿದ್ದರು..ಇನ್ನೇನು ಆ ಇಬ್ಬರ ಪ್ರೀತಿ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕಿತ್ತು..ಆದರೇ ಆ ಸ್ವಚ್ಚಂದ ಪ್ರೀತಿಗೆ ಜಾತಿ ಅನ್ನೋ ಮುಳ್ಳು ಅಡ್ಡಬಂದು ಒಂದು ಜೀವವನ್ನೇ ಬಲಿಪಡೆದುಕೊಂಡಿದೆ.

 ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದಾರೆ ಅಂತಾ ಅನಿಸುತ್ತದೆ. ಆದರೇ ಈ ಪ್ರೀತಿ ಎಲ್ಲೆಗೂ ಮೀರಿ ಇಂದು ಒಂದು ಪ್ರಾಣವನ್ನೇ ಬಲಿಪಡೆದುಕೊಂಡಿದೆ..ಪ್ರೀತಿಸಿದಾಕೆ ಸಿಗದಿದ್ದಕ್ಕೆ ಈ ಸ್ಪುರದೃಪಿ ಯುವಕ ತನ್ನ ಪ್ರಾಣವನ್ನೇ ತ್ಯಜಿಸಿಬಿಟ್ಟಿದ್ದಾನೆ. ಈ ಇಬ್ಬರ ಸ್ವಚ್ಚಂದ ಪ್ರೇಮಕ್ಕೆ ವಿಲನ್ ಆಗಿದ್ದು, ಆ ಯುವತಿಯ ತಂದೆ.

 ತುಮಕೂರು ನಗರದ ಕ್ಯಾತ್ಸಂದ್ರ ಬಳಿಯ ಬಸವಪಟ್ಟಣದ ರಾಘವೇಂದ್ರ ತಾನು  ಪ್ರೀತಿಸಿದ ಹುಡುಗಿ ಸಿಗದ್ದಿದ್ದಕ್ಕೆ ಮನನೊಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರಿನ ಹುಡುಗಿಯನ್ನ ತನ್ನ ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದ ರಾಘವೇಂದ್ರ,ಮದುವೆಯಾಗಲು ಮನೆಯವರನ್ನ ಒಪ್ಪಿಸಿದ್ದ, ಆದರೇ ಇವರ ಪ್ರೇಮ ವಿವಾಹಕ್ಕೆ ಜಾತಿ ಅಡ್ಡಿ ಬಂದಿದ್ದು, ಯಾವಾಗ ತನ್ನ ಪ್ರೀತಿ ದಕ್ಕುವುದಿಲ್ಲ ಎಂದು ತಿಳಿಯಿತೋ, ಜಾತಿ ಜಾತಿ ಎಂದು ಯಾಕೆ ಸಾಯ್ತೀರಾ ಎಂದು ಪ್ರಶ್ನಿಸಿ, ತನ್ನ ನೋವಿನ ನುಡಿಗಳನ್ನ ವಿಡಿಯೋ ಮಾಡಿ ಫೇಸ್ ಬುಕ್ ಗೆ ಹಾಕಿ ಪ್ರಾಣಬಿಟ್ಟಿದ್ದಾನೆ.

 ರಾಘವೇಂದ್ರ ಗಾಣಿಗ ಶೆಟ್ಟಿ, ಅಶ್ವಿನಿ ಒಕ್ಕಲಿಗ ಜಾತಿಯಾಗಿದ್ದು,,ರಾಘವೇಂದ್ರ ಹಾಗೂ ಅಶ್ವಿನಿ ಪ್ರೇಮ ವಿವಾಹಕ್ಕೆ‌ ಜಾತಿ ಅಡ್ಡಿಬಂದಿದೆ. ರಾಘವೇಂದ್ರ ತಾಯಿ ಈ ವಿವಾಹಕ್ಕೆ ಒಪ್ಪಿದ್ದರು. ಆದರೇ ಅಶ್ವಿನಿ ತಂದೆ ಈ‌ ಮದುವೆಗೆ ನಿರಾಕರಿಸಿದ್ದರು.  ಕಳೆದ ಐದು ತಿಂಗಳ ಹಿಂದಷ್ಟೆ ಈ ವಿವಾಹ ಮಾತುಕತೆ ಮುರಿದುಬಿದ್ದಿದ್ದು, ರಾಘವೇಂದ್ರ ಅಂದಿನಿಂದ ಸುಮ್ಮನಾಗಿದ್ದಾನೆ. ವಾರದ ಹಿಂದೆ ಅಶ್ವಿನಿ ಮತ್ತೇ ರಾಘವೇಂದ್ರ ಜೊತೆ ಮಾತಾಡಿದ್ದು, ಈ‌ ಹಿನ್ನೆಲೆ ಮತ್ತೇ ಮನನೊಂದು ತಡರಾತ್ರಿ ನೇಣಿಗೆ ಶರಣಾಗಿದ್ದಾನೆ. ತನ್ನ ಒಬ್ಬನೇ ಮಗನನ್ನ ಕಳೆದುಕೊಂಡ ರಾಘವೇಂದ್ರ ತಾಯಿ ಹಾಗೂ ಸಂಬಂಧಿಕರ ರೋಧನೆ ಮುಗಿಲುಮುಟ್ಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments