Select Your Language

Notifications

webdunia
webdunia
webdunia
webdunia

ಚಾಲಕನಿಲ್ಲದೇ ಚಲಿಸಿದ ಲಾರಿ: ಮುಂದೆ ಆದ ಅನಾಹುತ ಗೊತ್ತಾ?

ಚಾಲಕನಿಲ್ಲದೇ ಚಲಿಸಿದ ಲಾರಿ: ಮುಂದೆ ಆದ ಅನಾಹುತ ಗೊತ್ತಾ?
ಬೈಂದೂರು , ಮಂಗಳವಾರ, 1 ಜನವರಿ 2019 (20:03 IST)
ಐ.ಆರ್.ಬಿ. ಮಾಡಿದ ಅವಾಂತರ ಗೊತ್ತಾ ನಿಮಗೆ?
ಐ.ಆರ್.ಬಿ. ಅವಾಂತರದಿಂದಾಗಿ ಮನೆಯೊಂದರ ಕಂಪೌಂಡ್ ಧ್ವಂಸವಾಗಿದೆ.  ಬೈಂದೂರು  ತಾಲೂಕಿನ ನಾವುಂದ ಗ್ರಾಮ ಪಂಚಾಯಿತಿಯ ಅರೆಹೊಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅರೆಹೊಳೆಯ ಕುದ್ರುಕೋಡ್ ಎಂಬಲ್ಲಿ‌ ಘಟನೆ ನಡೆದಿದೆ.

ಲಾರಿಯಿಂದ ಕೆಳಕ್ಕಿಳಿದಿದ್ದ ಜಲ್ಲಿ ಲಾರಿ ಚಾಲಕನಿಂದಾಗಿ ಈ ಕೃತ್ಯ ನಡೆದಿದೆ. ಚಾಲಕನಿಲ್ಲದೇ ರಸ್ತೆಗೆ ನುಗ್ಗಿದ ಜಲ್ಲಿ ಲಾರಿ ಪ್ರಕಾಶ ಎನ್ನುವರ ಮನೆಯ ಕಂಪೌಂಡಗೆ ಗುದ್ದಿದೆ. ಕಂಪೌಂಡ್ ಗೋಡೆ,  ಬಾಳೆಗಿಡಗಳು ನಾಶವಾಗಿವೆ. ಸಮೀಪವೇ ಶಾಲೆಗೆ ತೆರಳಲು ನಿಂತಿದ್ದ ವಿದ್ಯಾರ್ಥಿಗಳು, ಸಮೀಪದ ಹೊಟೇಲ್ ನಲ್ಲಿದ್ದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ- ಕಾರವಾರ ಚತುಷ್ಪತ ಗುತ್ತಿಗೆ ಕಂಪೆನಿ ಐ.ಆರ್.ಬಿ. ವಾಹನ ಇದಾಗಿದೆ. 

ವಾಹನ ಚಾಲಕನ ಬೇಜವಾಬ್ದಾರಿಯಿಂದ ನಡೆದ ಘಟನೆ ಇದಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಬಂದರು ನಗರಿಯಲ್ಲಿ ಹೊಸ ವರ್ಷದ ಸಡಗರ