Publish Date: Sun, 10 Feb 2019 (17:26 IST)
Updated Date: Sun, 10 Feb 2019 (17:29 IST)
ಮುಂಬರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಏತನ್ಮಧ್ಯೆ ರೌಡಿಗಳ ವಿಚಾರಣೆ ತೀವ್ರಗೊಳಿಸಲಾಗುತ್ತಿದೆ.
ಮಂಡ್ಯ ಜಿಲ್ಲೆಯಲ್ಲಿ ರೌಡಿಗಳ ಪರೇಡ್ ನ್ನು ಪೊಲೀಸರು ನಡೆಸಿದರು. ಮಂಡ್ಯ ನಗರದ ಡಿಆರ್ ಮೈದಾನದಲ್ಲಿ ನಡೆದ ರೌಡಿಗಳ ಪರೇಡ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ನಡೆಯಿತು.
ಮುಂದಿನ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರೌಡಿಗಳ ಚಲನವಲನದ ಬಗ್ಗೆ ಪೋಲಿಸರು ಕಣ್ಣಿಟ್ಟಿದ್ದಾರೆ.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೌಡಿಗಳನ್ನು ಕರೆಸಿ ವಿಚಾರಣೆಯನ್ನು ಎಸ್ ಪಿ ನಡೆಸಿದರು. ರೌಡಿ ಚಟುವಟಿಕೆ ಬಿಟ್ಟು ಎಲ್ಲರೂ ಕಾನೂನು ಸುವ್ಯವಸ್ಥೆಯಲ್ಲಿ ಶಾಂತ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಎಸ್ ಪಿ ತಿಳಿಹೇಳಿದರು.