Select Your Language

Notifications

webdunia
webdunia
webdunia
webdunia

ರಂಗೇರುತ್ತಿದೆ ಲೋಕಸಭಾ ಚುನಾವಣಾ ಅಖಾಡ: ನಾಳೆ ಮೈಸೂರು, ಮಂಗಳೂರಿನಲ್ಲಿ ಮೋದಿ ಮತಭೇಟೆ

ರಂಗೇರುತ್ತಿದೆ ಲೋಕಸಭಾ ಚುನಾವಣಾ ಅಖಾಡ: ನಾಳೆ ಮೈಸೂರು, ಮಂಗಳೂರಿನಲ್ಲಿ ಮೋದಿ ಮತಭೇಟೆ

Sampriya

ಮೈಸೂರು , ಶನಿವಾರ, 13 ಏಪ್ರಿಲ್ 2024 (19:53 IST)
Photo Courtesy X
ಮೈಸೂರು: ಲೋಕಸಭಾ ಚುನಾವಣಾ ಕಣ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಆಡಳಿತ ಪಕ್ಷ, ವಿಪಕ್ಷಗಳು ಹೆಚ್ಚು ಸ್ಥಾನ ಗೆಲ್ಲಲ್ಲು ಕಸರತ್ತು ನಡೆಸುತ್ತಿದೆ.  

ಇನ್ನೂ ಕರ್ನಾಟಕದಲ್ಲಿ ಮೋದಿ ಗೆಲುವಿಗೆ ಹೆಚ್ಚು ಸ್ಥಾನ ಗೆದ್ದು ಕೊಡಬೇಕೆಂಬ ಗುರಿಯಲ್ಲಿ ಬಿಜೆಪಿ ಇದೆ. ಈ ಹಿನ್ನೆಲೆ ಜನರ ಪ್ರೀತಿ ಗಳಿಸಲು, ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ, ಮಂಗಳೂರಿನಲ್ಲಿ ಮತಭೇಟೆ ಮಾಡಲಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬಿಜೆಪಿಯ ವಿಜಯಸಂಕಲ್ಪ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಮಾವೇಶದಲ್ಲಿ 60 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಲಿದ್ದಾರೆ ಎಂದರು. ನಂತರ ರಾತ್ರಿ ಮಂಗಳೂರಿನಲ್ಲಿ ಮೋದಿ ಮತಭೇಟೆ ಮಾಡಲಿದ್ದಾರೆ.

ಇನ್ನೂ ರಾತ್ರಿ ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪ್ರಧಾನಿ ಮೋದಿ ಮೈಸೂರಿನಿಂದ ನೇರವಾಗಿ ಮಂಗಳೂರಿಗೆ ಬಂದು ರಾತ್ರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತಭೇಟೆ ನಡೆಸಲಿದ್ದಾರೆ.

ಮಂಗಳೂರಿನ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ತೆರೆದ ವಾಹನದಲ್ಲಿ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ. ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೈಸೂರು ಹಾಗೂ ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಕೈಗೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಯನಗರದಲ್ಲಿ ಸೀಜ್‌ ಆಗಿದ್ದು ಬಿಜೆಪಿ ಕೊಳ್ಳೆ ಹೊಡೆದ ಪಾಪದ ಹಣ: ಸಚಿವ ರಾಮಲಿಂಗಾರೆಡ್ಡಿ