Publish Date: Sun, 12 Apr 2020 (08:47 IST)
Updated Date: Sun, 12 Apr 2020 (08:49 IST)
ಬೆಂಗಳೂರು: ಕೊರೋನಾ ಹರಡುವಿಕೆ ತಡೆಯಲು ಸರ್ಕಾರ ಲಾಕ್ ಡೌನ್ ವಿಸ್ತರಣೆ ಮಾಡಿರುವುದು ಉತ್ತಮ ನಿರ್ಧಾರವೇ. ಆದರೆ ಸುದೀರ್ಘ ಲಾಕ್ ಡೌನ್ ನಿಂದ ದಿನಗೂಲಿ ನೌಕರರ ಕತೆ ಬೀದಿ ಪಾಲಾಗಲಿದೆ.
ದಿನಗೂಲಿ ನೌಕರರು, ಟ್ಯಾಕ್ಸಿ ಚಾಲಕರು, ಪ್ರತಿನಿತ್ಯದ ದುಡಿಮೆ ಆಧಾರದಲ್ಲಿ ವೇತನ ಪಡೆಯುವ ಎಲ್ಲರಿಗೂ ಇದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗಲಿದೆ.
ಅಷ್ಟೇ ಅಲ್ಲ, ಕೆಲವು ಸಣ್ಣ ಖಾಸಗಿ ಕಂಪನಿಗಳೂ ತಮ್ಮ ನೌಕರರಿಗೆ ಇಡೀ ತಿಂಗಳ ವೇತನವನ್ನು ನೀಡದೇ ಇರಲೂಬಹುದು. ಇದರಿಂದಾಗಿ ಇಂತಹ ನೌಕರರು ಪ್ರತಿನಿತ್ಯ ಸರ್ಕಾರ ನೀಡುವ ಉಚಿತ ಊಟ, ದಿನಸಿ ಕಡೆಗೆ ಎದುರು ನೋಡುವಂತಾಗಿದೆ. ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.