Publish Date: Tue, 17 Oct 2023 (14:01 IST)
Updated Date: Tue, 17 Oct 2023 (14:05 IST)
ಕೆ.ಆರ್.ಐ.ಡಿ.ಸಿ.ಎಲ್ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿ ಎಂದು ಶಾಸಕ ಪ್ರಸಾದ್ ಅಬ್ಬಯ್ಯರಿಗೆ ನಿಗಮ ಮಂಡಳಿಗೆ ಆಗ್ರಹಿಸಿದೆ.
ಶಾಸಕ ಪ್ರಸಾದ್ ಅಬ್ಬಯ್ಯ ಪರವಾಗಿ ಡಿಸಿಎಂ ಶಿವಕುಮಾರ್ ಮನೆ ಮುಂದೆ ನೂರಾರು ಮಂದಿ ಬೆಂಬಲಿಗರು ಜಮಾಯಿಸಿದ್ರು.ಶಾಸಕ ಪ್ರಸಾದ್ ಅಬ್ಬಯ್ಯರಿಗೆ ನ್ಯಾಯ ಕೊಡಿ ಎಂಬ ಘೋಷಣೆ ಜೊತೆಗೆ, ಕಾಂಗ್ರೆಸ್ ಪಕ್ಷದ ಪರ ಘೋಷಣೆ ಕೂಗಿದ್ರು.ಶಾಸಕ ಪ್ರಸಾದ್ ಅಬ್ಬಯ್ಯ ಬೆಂಬಲಿಗರ ಅಬ್ಬರವನ್ನ ಮನೆಯ ಟೆರೆಸ್ ನಿಂದ ಡಿಕೆ ಶಿವಕುಮಾರ್ ಗಮನುಸಿದ್ರು.ಶಾಂತಿಯಿಂದ ಇರುವಂತೆ ಸೂಚನೆ ಕೊಟ್ಟು ಮತ್ತೆ ಡಿಸಿಎಂ ಶಿವಕುಮಾರ್ ಒಳಹೊರಟರು. ಬಳಿಕ ಡಿಕೆ ಶಿವಕುಮಾರ್ ನಿವಾಸಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಆಗಮಿಸಿದ್ರು.ಪ್ರಸಾದ್ ಅಬ್ಬಯ್ಯ ಬೆಂಬಲಿಗರ ಮನವಿ ಡಿಸಿಎಂ ಡಿಕೆ ಶಿವಕುಮಾರ್ ಆಲಿಸಿದ್ರು.