Select Your Language

Notifications

webdunia
webdunia
webdunia
webdunia

ಅಥಣಿ ಬಂದ್‌ಗೆ ಲಕ್ಷ್ಮಣ್ ಸವದಿ ಬೆಂಬಲ

ಅಥಣಿ ಬಂದ್‌ಗೆ ಲಕ್ಷ್ಮಣ್ ಸವದಿ ಬೆಂಬಲ
ಬೆಳಗಾವಿ , ಸೋಮವಾರ, 11 ಡಿಸೆಂಬರ್ 2023 (18:41 IST)
ಬೆಳಗಾವಿ ಜಿಲ್ಲೆ ವಿಭಜಿಸಿ ಅಥಣಿ ನೂತನ ಜಿಲ್ಲೆ ಮಾಡುವಂತೆ ಆಗ್ರಹಿಸಿ ಇಂದು ಅಥಣಿ ಬಂದ್ ಮಾಡಲಾಗಿದೆ. ಅಥಣಿ ಜಿಲ್ಲಾ ಹೋರಾಟ ಸಮಿತಿ ಬಂದ್‌ಗೆ ಕರೆ ಕೊಟ್ಟಿದ್ದು, ಪ್ರತಿಭಟನಾ ಸ್ಥಳಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿದ್ದಾರೆ.

ಈ ವೇಳೆ ಶಾಸಕರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಬೆಳಗಾವಿ ಜಿಲ್ಲೆಯಿಂದ ಅಥಣಿ ಬೇರ್ಪಡಿಸಿ ಜಿಲ್ಲೆ ಮಾಡುವಂತೆ ಕೋರಿಕೊಂಡ್ರು. ಇನ್ನು, ಇದೇ ವೇಳೆ ಹೋರಾಟಗಾರರ ಜೊತೆಗೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಅಥಣಿ ಕೊನೆ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಸುಮಾರು 200 ಕಿಲೋ ಮೀಟರ್ ಆಗುತ್ತೆ. ಇದ್ರಿಂದ ಅಥಣಿ ಭಾಗದ ಜನರಿಗೆ ಬಹಳ ತೊಂದರೆಯಾಗ್ತಿದೆ. ಹೀಗಾಗಿ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದ ಸವದಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ವಿವಾದದ ಹೇಳಿಕೆಗೆ ಬಿಜೆಪಿ ಕಿಡಿ