Webdunia - Bharat's app for daily news and videos

Install App

ನನಗೆ ಅಪಘಾತ ಆಗಿದ್ದರಿಂದ ಗೃಹಲಕ್ಷ್ಮಿ ಹಣ ಲೇಟ್ ಆಯ್ತು: ಲಕ್ಷ್ಮೀ ಹೆಬ್ಬಾಳ್ಕರ್

Krishnaveni K
ಶುಕ್ರವಾರ, 21 ಫೆಬ್ರವರಿ 2025 (15:03 IST)
ಬೆಂಗಳೂರು: ನನಗೆ ಅಪಘಾತ ಆಗಿ ಆಸ್ಪತ್ರೆಯಲ್ಲಿದ್ದಿದ್ದರಿಂದ ಗೃಹಲಕ್ಷ್ಮಿ ಹಣ ಹಾಕೋದು ಸ್ವಲ್ಪ ಲೇಟ್ ಆಯ್ತು. ಒಂದು ವಾರದಲ್ಲಿ ಎಲ್ಲಾ ಕ್ಲಿಯರ್ ಮಾಡ್ತೀವಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆ ಬಾಕಿಯಿದೆ. ಅಪಘಾತದಿಂದ ಚೇತರಿಸಿಕೊಂಡ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದೇ ಮೊದಲ ಬಾರಿಗೆ ತಮ್ಮ ಕೆಲಸಗಳಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಗೃಹಲಕ್ಷ್ಮಿ ವಿಳಂಬವಾಗುತ್ತಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಟೀಕೆ ಮಾಡುತ್ತಿವೆ. ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಅವರು ವಿಳಂಬಕ್ಕೆ ತಮ್ಮ ಅಪಘಾತವೇ ಕಾರಣ ಎಂದಿದ್ದಾರೆ.

‘ನನಗೆ ಅಪಘಾತವಾಗಿ 3 ತಿಂಗಳು ಲೇಟ್ ಆಯ್ತು. ಇಲ್ಲದೇ ಹೋಗಿದ್ದರೆ ನಾನು ಹಣಕಾಸು ಇಲಾಖೆಗೆ ಪದೇ ಪದೇ ಒತ್ತಡ ಹಾಕುತ್ತಿರುತ್ತೇನೆ. ವಿಳಂಬ ಮಾಡಿದರೆ ತೊಂದರೆ ಆಗುತ್ತದೆ ಎಂದು ಹಣಕಾಸು ಇಲಾಖೆಗೆ ನೆನಪಿಸುತ್ತಿದ್ದೆ. ಸಿಎಂ ಗಮನಕ್ಕೂ ತರುತ್ತಿದ್ದೆ. ದುರ್ದೈವ ನನಗೆ ಅಪಘಾತವಾಗಿ 40 ದಿನ ಮನೆಯಲ್ಲಿ ಕೂರುವಂತೆ ಆಯಿತು’ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments