Select Your Language

Notifications

webdunia
webdunia
webdunia
Thursday, 24 April 2025
webdunia

ಲಕ್ಷ್ಮಣ ಸವದಿ ವಿಷ ಕೊಟ್ಟರೂ ಅಮೃತವಾಗಲಿ: ಕುಮಠಳ್ಳಿ ತಿರುಗೇಟು

ಮಹೇಶ್ ಕುಮಠಳ್ಳಿ
ಚಿಕ್ಕೋಡಿ , ಶುಕ್ರವಾರ, 27 ಸೆಪ್ಟಂಬರ್ 2019 (13:06 IST)
ಅನರ್ಹ ಶಾಸಕ ಮಹೇಶ್ ಕುಮಠಳ್ಳಿಗೆ ಡಿ ಸಿಎಮ್ ಲಕ್ಷ್ಮಣ ಸವದಿಯಿಂದ ನಿಂದನೆ ಆಗಿರೋ ವಿಚಾರಕ್ಕೆ ಕುಮಠಳ್ಳಿ ನಯವಾಗಿಯೇ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮಠಳ್ಳಿ, ನಾನು ಕೂಡ ಜನರ ಮದ್ಯೆ ಇದ್ದು ಕೆಲಸ ಮಾಡಿದ್ದೇನೆ. ಲಕ್ಷ್ಮಣ ಸವದಿ ಅವರು ಯಾಕೆ ಹೀಗೆ ಮಾತನಾಡಿದರು ಅನ್ನುವದು ತಿಳಿದಿಲ್ಲ.

ಅವರ ಮಾತಿನಿಂದ ನನಗೂ ತೀವ್ರ ನೋವಾಗಿದೆ ಎಂದಿದ್ದಾರೆ.

ವಿಷ ಕೊಟ್ಟರೂ ಅದು ಅಮೃತವಾಗಲಿ ಎಂದು ಬಯಸುವವನು ನಾನು. ನಾನು ಅವರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತೇನೆ ಅಂತ ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹೇಶ್ ಕುಮುಟಳ್ಳಿಯನ್ನು ದರಿದ್ರ ಎಂದು ನಿಂದಿಸಿದ ಡಿಸಿಎಂ ಲಕ್ಷ್ಮಣ ಸವದಿ