Select Your Language

Notifications

webdunia
webdunia
webdunia
webdunia

ಕೆರೆ ಗಬ್ಬು ನಿವಾಸಿಗಳ ಪರದಾಟ

ಕೆರೆ ಗಬ್ಬು ನಿವಾಸಿಗಳ ಪರದಾಟ
ಬೆಂಗಳೂರು , ಸೋಮವಾರ, 21 ಮಾರ್ಚ್ 2022 (15:14 IST)
ಒಂದು ಕಾಲದಲ್ಲಿ ನೀರು ತುಂಬಿ ವಲಸೆ ಹಕ್ಕಿಗಳು ಹಾಗೂ ಸುಂದರವಾದ ಹೂವುಗಳಿಗೆ ನೆಲೆಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ (ಹಳೆ ವಿಮಾನ ನಿಲ್ದಾಣದ ಆಚೆ) ವಿಭೂತಿ ಪುರ ಕೆರೆ ಈಗ ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.
ಒಂದು ಕಡೆ ಮಾತ್ರ ನೀರು ನಿಂತಿದ್ದು, ಉಳಿದೆಲ್ಲಾ ಕಡೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.
 
ಗತ ವೈಭವದ ದಿನಗಳಲ್ಲಿ ಕೆರೆಯನ್ನು ನೋಡಿದ ವಾಯುವಿಹಾರಿಗಳು, ಅದರ ಈಗ ಸ್ಥಿತಿ ಕಂಡು ಆಕ್ರೋಶಗೊಂಡಿದ್ದಾರೆ.
ಕೆರೆಯ ತುಂಬೆಲ್ಲಾ ಗಿಡಗಂಟಿಗಳು ನಾಯಿಕೊಡೆಗಳಂತೆ ಬೆಳೆದಿವೆ. ಕೆರೆಯ ಒಂದು ತುದಿಯಲ್ಲಿರುವ ಉದ್ಯಾನವನ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ಮಕ್ಕಳಿಗಾಗಿ ಇದ್ದ ಉಪಕರಣಗಳು ಮುರಿದು ಬಿದ್ದಿವೆ.
 
ಒಂದು ಕಾಲದಲ್ಲಿ 43 ಎಕರೆಗೆ ಚಾಚಿಕೊಂಡಿದ್ದ ಕೆರೆ ಗಾತ್ರ ಇದೀಗ ಒತ್ತುವರಿಯಿಂದಾಗಿ ಕುಗ್ಗಿದೆ. ಕೆರೆಯ ಸುತ್ತಲಿನ ಮನೆಗಳಿಂದ ಸಂಸ್ಕರಿಸದ ಚರಂಡಿ ನೀರನ್ನು ಹರಿಸುತ್ತಿರುವುದರಿಂದ ಅದು ಹಾಳಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ನಿವಾಸಿಯೊಬ್ಬರು ದು:ಖ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಗಂಗಾ ಪೂರ್ಣ : ಉಕ್ರೇನ್ನಿಂದ ವಿದ್ಯಾರ್ಥಿಗಳು ವಾಪಸ್