Webdunia - Bharat's app for daily news and videos

Install App

ಕುಮಾರಸ್ವಾಮಿ ಕರಾಳ ಪುಟದಲ್ಲಿ 'ದಾರಿ ತಪ್ಪಿದ್ದು' ಸೇರಿ ಹಲವು ಅಧ್ಯಾಯಗಳು: ಕಾಂಗ್ರೆಸ್ ವ್ಯಂಗ್ಯ

Sampriya
ಸೋಮವಾರ, 12 ಆಗಸ್ಟ್ 2024 (20:32 IST)
ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ  ಕರಾಳ ಇತಿಹಾಸದ ಪುಟಗಳನ್ನು ತೆರೆಯುತ್ತಿದ್ದರೆ ಹಲವು ಬಗೆಯ ಅಧ್ಯಾಯಗಳು ಸಿಗುತ್ತಲೇ ಹೋಗುತ್ತದೆ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.

ಮುಡಾ, ವಾಲ್ಮೀಕಿ ಹಗರಣವನ್ನು ಮುಂದಿಟ್ಟು ವಿಪಕ್ಷಗಳು ನಡೆಸಿದ ಪಾದಯಾತ್ರೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಮೇಲೆ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಡಿಕೆಶಿ ಅವರಲ್ಲಿ ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಇಂದು ಎಕ್ಸ್‌ ಖಾತೆಯಲ್ಲಿ ಕುಮಾರಸ್ವಾಮಿ ಅವರ ಹಳೇ ವಿಚಾರಗಳನ್ನು ಪ್ರಸ್ತಾಪಿಸಿ ಕೆಣಕಿದ್ದಾರೆ. ಸದ್ಯ ಡಿಕೆಶಿ ಹಾಗೂ ಎಚ್‌ಡಿಕೆ ಮಧ್ಯೆ ವಾಕ್ಸಮರ ಮುಂದುವರೆದಿದೆ.

ಕಾಂಗ್ರೆಸ್ ಹಂಚಿಕೊಂಡ ಫೋಸ್ಟ್‌ನಲ್ಲಿ ಏನಿದೆ:

ಯೂಟರ್ನ್ ಅಧ್ಯಾಯ,
ಭ್ರಷ್ಟಾಚಾರದ ಅಧ್ಯಾಯ,
ನಂಬಿಕೆ ದ್ರೋಹದ ಅಧ್ಯಾಯ,
ವಂಚನೆಯ ಅಧ್ಯಾಯ,
ದಾರಿ ತಪ್ಪಿದ ಅಧ್ಯಾಯ,
ವಚನಭ್ರಷ್ಟತೆಯ ಅಧ್ಯಾಯ.

ಹೀಗೆ ಹಲವು ಅಧ್ಯಾಯಗಳಲ್ಲಿ ಕರಾಳ ಕತೆಗಳು ತೆರೆದುಕೊಳ್ಳುತ್ತವೆ.

ಕರ್ನಾಟಕದ ಮೇರು ಸಾಹಿತಿ ಯು. ಆರ್ ಅನಂತಮೂರ್ತಿಯವರನ್ನೇ “ಯಾರು“ ಎಂದು ಪ್ರಶ್ನಿಸಿದ್ದ ಕುಮಾರಸ್ವಾಮಿಯವರು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವಯಕ್ತಿಕ ಬದುಕಿನ ಬಗ್ಗೆ ಟೀಕಿಸಿದ್ದರು.

ಸಂತೋಷ್ ಹೆಗ್ಡೆಯವರಿಂದ
”ನಾನು ಸೀದಾ ನನ್ನ ಮನೆಗೇ ಹೋಗುತ್ತೇನೆ, ಕುಮಾರಸ್ವಮಿಯವರು ಎಲ್ಲಿ ಹೋಗುತ್ತಾರೆ“ ಎಂಬ ಮಾರ್ಮಿಕ ಹೇಳಿಕೆಯ ತಪರಾಕಿಯನ್ನೂ ಪಡೆದಿದ್ದರು.

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಅವಕಾಶವಾದಿ ಹಾಗೂ ಸ್ಥಿಮಿತವಿಲ್ಲದ ರಾಜಕಾರಿಣಿಯಾದ ಎಚ್ ಡಿ ಕುಮಾರಸ್ವಾಮಿ  ಅವರಿಂದ ಕಾಂಗ್ರೆಸ್ ಪಕ್ಷ ಬುದ್ದಿ ಕಲಿಯುವ ಅಗತ್ಯವಿಲ್ಲ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಒಂದು ಉಗ್ರ ಹೋರಾಟ

Priyank Kharge: ನಿಮ್ಮ ಮಕ್ಳು ಮಾತ್ರ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಬೇಕಾ: ಪ್ರಿಯಾಂಕ್ ಖರ್ಗೆಗ ನೆಟ್ಟಿಗರು ಟಾಂಗ್

Indore Raja Raguvamshi murder: ಮಗನಂತೇ ನಾಟಕವಾಡಿ, ರಘುವಂಶಿ ಸಾವಿನ ದಿನ ತಬ್ಬಿ ಸಾಂತ್ವನಿಸಿದ್ದ ಆರೋಪಿ ರಾಜ್

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

ಮುಂದಿನ ಸುದ್ದಿ
Show comments