Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾಗೆ ಮಾತ್ರ ಈ ಸ್ಪೆಷಲ್ ವಿನಾಯ್ತಿ ನೀಡಿದ ಬಿಸಿಸಿಐ

Rohit Sharma-Virat Kohli

Krishnaveni K

ಮುಂಬೈ , ಸೋಮವಾರ, 12 ಆಗಸ್ಟ್ 2024 (16:15 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ ಟೂರ್ನಿ ಆಡದೇ ಎಷ್ಟೋ ಸಮಯವಾಗಿದೆ. ಇದೀಗ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದ್ದು, ರೋಹಿತ್, ಕೊಹ್ಲಿ, ಬುಮ್ರಾಗೆ ಈ ಟೂರ್ನಿಯಿಂದ ವಿನಾಯ್ತಿ ಸಿಗಲಿದೆ.

ಇತ್ತೀಚೆಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವ ಫಾರ್ಮ್ ನಲ್ಲಿಲ್ಲ. ರೋಹಿತ್ ಶರ್ಮಾ ಕೂಡಾ ಸುದೀರ್ಘ ಮಾದರಿಯ ಆಟದಲ್ಲಿ ದೊಡ್ಡ ಮೊತ್ತ ಗಳಿಸಿದ್ದು ಅಪರೂಪ ಎನ್ನುವಂತಾಗಿದೆ.  ಸದ್ಯದಲ್ಲೇ ಚಾಂಪಿಯನ್ಸ್ ಟ್ರೋಫಿ, ಮಹತ್ವದ ಟೆಸ್ಟ್ ಸರಣಿಗಳು ಭಾರತ ಮುಂದಿದ್ದು ಈ ಸರಣಿಗಳಿಗೆ ತಯಾರಾಬೇಕಿದೆ.

ಆದರೆ ಈ ಮೂವರು ಹಿರಿಯ ಆಟಗಾರರಿಗೆ ಮತ್ತೆ ದೇಶೀಯ ಕ್ರಿಕೆಟ್ ನಿಂದ  ವಿನಾಯ್ತಿ ನೀಡಲಾಗಿದೆ. ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಭಾರತದ ಮೂವರು ದಿಗ್ಗಜ ಆಟಗಾರರು ಆಡಬಹುದು ಎಂದು ಈ ಮೊದಲು ಊಹಾಪೋಹಗಳಿದ್ದವು. ಆದರೆ ಅದೆಲ್ಲಾ ಸುಳ್ಳಾಗಿದೆ.

ಈ ಮೂವರನ್ನು ಹೊರತುಪಡಿಸಿ ಕೆಎಲ್ ರಾಹುಲ್, ಶುಬ್ಮನ್ ಗಿಲ್, ರಿಷಬ್ ಪಂತ್ ರಂತಹ ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡಲಿದ್ದಾರೆ. ಅದರಲ್ಲೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಹವಣಿಸುತ್ತಿರುವ ರಿಷಬ್ ಪಂತ್, ಸರ್ಫರಾಜ್ ಖಾನ್, ಶುಬ್ಮನ್ ಗಿಲ್ ಮುಂತಾದ ಆಟಗಾರರಿಗೆ ಈ ದೇಶೀಯ ಟೂರ್ನಿ ಸಾಮರ್ಥ್ಯ ಸಾಬೀತುಪಡಿಸಲು ವೇದಿಕೆಯಂತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಯಾಣ ಸರ್ಕಾರ ನೀಡಿದ ಸರ್ಕಾರಿ ಕೆಲಸವನ್ನೇ ತಿರಸ್ಕರಿಸಿದ ಒಲಿಂಪಿಕ್ಸ್ ಪದಕ ವಿಜೇತ ಸರಬ್ಜೋತ್