Publish Date: Sun, 11 Jun 2023 (12:31 IST)
Updated Date: Sun, 11 Jun 2023 (11:33 IST)
ಇಂದು ರಾಜ್ಯದಾದ್ಯಂತ ಶಕ್ತಿ ಯೋಜನೆಗೆ ಚಾಲನೆ ದೊರೆಯಲಿರುವ ಹಿನ್ನಲೆ KSRTC ಬಸ್ ನಿಲ್ದಾಣ ಸಿದ್ದಗೊಂಡಿದೆ.ಕೆ.ಎಸ್.ಆರ್.ಟಿ.ಸಿ ಟರ್ಮಿನಲ್ -2 ನಲ್ಲಿ ಉದ್ಘಾಟನೆಗೆ ಸಿಎಂ, ಡಿಸಿಎಂ, ಸಾರಿಗೆ ಸಚಿವರು ಆಗಮಿಸಲ್ಲಿದ್ದಾರೆ.KSRTC ನಿಲ್ದಾಣದಲ್ಲಿ ರಂಗೋಲಿ ಬಿಡಿಸಿ ಹಬ್ಬದ ವಾತಾವರಣವನ್ನ ಮಹಿಳೆಯರು ಸೃಷ್ಟಿಸಿದ್ದಾರೆ.ಅಲ್ಲದೇ BMTC ನಿಲ್ದಾಣಕ್ಕೂ ಸಿಎಂ ಆಗಮಿಸುವ ಸಾಧ್ಯತೆ ಹಿನ್ನಲೆ ವೇದಿಕೆಯನ್ನ BMTC ಅಧಿಕಾರಿಗಳು ಸಿದ್ದಪಡಿಸಿದ್ದಾರೆ.
ಶಕ್ತಿ ಯೋಜನೆಗೆ ಚಾಲನೆ ಕಾರ್ಯಕ್ರಮಕ್ಕೆ ಕೌಂಟ್ ಡೌನ್ ಶುರುವಾಗಿದ್ದು,ವಿಧಾನಸೌಧದ ಮುಂಭಾಗದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದು,ಬಿಗಿ ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.ಅಲ್ಲದೇ ಡಾಗ್ ಸ್ವ್ಕಾಡ್ ನಿಂದ ವೇದಿಕೆಯ ಮುಂಭಾಗ ಪರಿಶೀಲನೆ ನಡೆಸಲಾಗಿದೆ