ಸಂಕ್ರಾಂತಿ ಹಬ್ಬದ ಬಳಿಕ ಬಸ್ ದರ ಏರಿಕೆ ಗ್ಯಾರಂಟಿ

Krishnaveni K
ಗುರುವಾರ, 2 ಜನವರಿ 2025 (09:51 IST)
ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ಸಾಮಾನ್ಯ ವರ್ಗದ ಜನರಿಗೆ ಬಸ್ ದರ ಏರಿಕೆಯ ಗ್ಯಾರಂಟಿ ಕಾದಿದೆ. ಹಬ್ಬ ಮುಗಿದ ಬೆನ್ನಲ್ಲೇ ಬಸ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಕಳೆದ 10 ವರ್ಷಗಳಿಂದ ಬಿಎಂಟಿಸಿ ಬಸ್ ದರ ಏರಿಕೆ ಮಾಡಿಲ್ಲ. ಹೀಗಾಗಿ ಬಸ್ ದರ ಏರಿಕೆ ಮಾಡುವಂತೆ ನಿಗಮಗಳಿಂದ ಬೇಡಿಕೆ ಬಂದಿದೆ. ಸಂಕ್ರಾಂತಿ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರಿಗೆ ಸಂಸ್ಥೆ ಮುಖಂಡರ ಸಭೆ ನಡೆಯಲಿದೆ.

ಕೆಎಸ್ ಆರ್ ಟಿಸಿ ದರ ಏರಿಕೆಯಾಗಿ 5 ವರ್ಷಗಳಾಗಿವೆ. ಹೀಗಾಗಿ ಈಗ ಬಸ್ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಆರ್ಥಿಕ ಸಂಕಷ್ಟವನ್ನು ಸರಿದೂಗಿಸಬೇಕಾದರೆ ಬಸ್ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಂಸ್ಥೆಗಳು ಬೇಡಿಕೆಯಿಟ್ಟಿವೆ.

ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಬಿಡಿ ಭಾಗಗಳೂ ದುಬಾರಿಯಾಗಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಬೇಕೆಂದು ನಾಲ್ಕೂ ನಿಗಮಗಳೂ ಬೇಡಿಕೆಯಿಟ್ಟಿದೆ. ಸಾರಿಗೆ ನಿಗಮಗಳ ಬೇಡಿಕೆಗೆ ಸರ್ಕಾರ ಕೂಡಾ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಹೀಗಾಗಿ ಸಂಕ್ರಾಂತಿ ಹಬ್ಬದ ಬಳಿಕ ಶೇ.15 ರಷ್ಟು ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈತ ನಿಜವಾಗಿಯೂ ಹೀರೋ.. ಮಗುವಿನ ಪ್ರಾಣ ಉಳಿಸಲು ಎಂಥಾ ರಿಸ್ಕ್ ತಗೊಂಡ್ರು ನೋಡಿ Video

ಪೊಲೀಸರ ಈ ದರ್ಪಕ್ಕೆ ಏನನ್ನಬೇಕು... ಆಕ್ಸಿಡೆಂಟ್ ಮಾಡಿದ್ದಲ್ಲದೆ ಹೀಗೆಲ್ಲಾ ಮಾಡೋದಾ: ಪಬ್ಲಿಕ್ ಛಿಮಾರಿ Video

ಉಪವಾಸ ಅಂತ್ಯಗೊಳಿಸಿದ ಬೆನ್ನಲ್ಲೇ ಸೋನಂ ವಾಂಗ್ಚುಕ್ ಮಹತ್ವದ ಘೋಷಣೆ

ವಿದ್ಯಾರ್ಥಿಗಳ ಪ್ರತಿಭಟನೆ ಕಾವೇರುತ್ತಿದ್ದಂತೇ ರಾತ್ರೋ ರಾತ್ರಿ ವಿಡಿಯೋ ಸಂದೇಶ ನೀಡಿದ ಪ್ರಧಾನಿ ಮೋದಿ ಹೇಳಿದ್ದೇನು Video

Karnataka Weather: ಈ ಜಿಲ್ಲೆಯಲ್ಲಿ ಇಂದು ಗಾಳಿ, ಮಳೆ ಸಾಧ್ಯತೆ

ಮುಂದಿನ ಸುದ್ದಿ
Show comments