Select Your Language

Notifications

webdunia
webdunia
webdunia
webdunia

‘ಮೋದಿ ಎಂಬ ಹುಲಿ ಫೆ.4 ರಂದು ಘರ್ಜಿಸಲಿದೆ, ಸಿಎಂ ಸಿದ್ದರಾಮಯ್ಯ ಆಗ ಇಲಿಯಾಗ್ತಾರೆ’

‘ಮೋದಿ ಎಂಬ ಹುಲಿ ಫೆ.4 ರಂದು ಘರ್ಜಿಸಲಿದೆ, ಸಿಎಂ ಸಿದ್ದರಾಮಯ್ಯ ಆಗ ಇಲಿಯಾಗ್ತಾರೆ’
ಮೈಸೂರು , ಗುರುವಾರ, 25 ಜನವರಿ 2018 (16:35 IST)
ಮೈಸೂರು: ಮೋದಿ ಎಂಬ ಹುಲಿ ಫೆಬ್ರವರಿ 4 ರಂದು ಬೆಂಗಳೂರಿನಲ್ಲಿ ಘರ್ಜಿಸಲಿದೆ. ಆಗ ಸಿಎಂ ಸಿದ್ದರಾಮಯ್ಯ ಇಲಿಯಾಗುತ್ತಾರೆ.. ಹೀಗೆಂದು ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಟೀಕಿಸಿದ್ದಾರೆ.
 

ಮೈಸೂರಿನಲ್ಲಿ ಅಮಿತ್ ಶಾ ಪಾಲ್ಗೊಂಡಿರುವ ಪರಿವರ್ತನಾ ರ್ಯಾಲಿಯಲ್ಲಿ ಭಾಷಣ ಮಾಡಿದ ಕೆಎಸ್ ಈಶ್ವರಪ್ಪ ರೋಷಾವೇಷದಿಂದ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈ ರೀತಿಯಾಗಿ ವಾಗ್ದಾಳಿ ನಡೆಸಿದ್ದಾರೆ.

ಫೆಬ್ರವರಿ 4 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದು, ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಕರ್ನಾಟಕ ಬಂದ್ ನ ಮೂಲಕ ಅಡ್ಡಿಪಡಿಸುತ್ತಿದೆ ಎಂಬುದು ಬಿಜೆಪಿ ಆರೋಪ. ಇದೇ ಹಿನ್ನಲೆಯಲ್ಲಿ ಈಶ್ವರಪ್ಪ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬಂದ್ ಕೊನೆಗೂ ಮುಗಿಯಿತು, ರಸ್ತೆಗಿಳಿದ ಬಸ್