Publish Date: Wed, 15 Nov 2017 (09:56 IST)
Updated Date: Wed, 15 Nov 2017 (10:00 IST)
ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಸದನದ ಮೇಲ್ಮನೆಯಲ್ಲಿ ಮಂಗಳವಾರ ಮುಜರಾಯಿ ಇಲಾಖೆ ಕುರಿತು ಪ್ರಶ್ನೋತ್ತರ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಮುಜರಾಯಿ ಇಲಾಖೆ ಸಿಕ್ಕಿದ್ದೇ ನಿಮ್ಮ ಅದೃಷ್ಟ ಎಂದುಕೊಳ್ಳಿ. ಮುಜರಾಯಿ ಇಲಾಖೆ ಎಂದರೆ ದೇವರ ಕೆಲಸ ಎಂದು ಈಶ್ವರಪ್ಪ, ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿಗೆ ಛೇಡಿಸಿದರು.
ಈ ಸಂದರ್ಭದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮುಜರಾಯಿ ಇಲಾಖೆ ಸಿಕ್ಕಿದರೆ ಚುನಾವಣೆಯಲ್ಲಿ ಸೋಲಾಗುತ್ತದೆ ಎಂಬ ಇತಿಹಾಸವಿದೆಯಲ್ಲವೇ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಮುಂದಿನ ಬಾರಿ ಮುಜರಾಯಿ ಖಾತೆಯನ್ನೇ ಕೇಳಿ ಪಡೆಯುತ್ತೇನೆ ಎಂದರು.
ನನಗೆ ಆ ಖಾತೆ, ಈ ಖಾತೆ ಎಂದೇನಿಲ್ಲ. ಇದುವರೆಗೆ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಮುಂದಿನ ಬಾರಿ ಮುಜರಾಯಿ ಇಲಾಖೆಯನ್ನೇ ಕೇಳಿ ಪಡೆಯುತ್ತೇನೆ. ಅದು ನನ್ನ ಸೌಭಾಗ್ಯ ಎಂದುಕೊಳ್ಳುತ್ತೇನೆ. ನಾನು ಮುಜರಾಯಿ ಇಲಾಖೆಗೆ ಬಂದರೆ ಕಾಂಗ್ರೆಸ್ ನೆಗೆದು ಬಿದ್ದು ಹೋಗುವಂತೆ ಮಾಡುತ್ತೆನೆ’ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ