Select Your Language

Notifications

webdunia
webdunia
webdunia
webdunia

ಮುಂದಿನ ಬಾರಿ ಮುಜರಾಯಿ ಖಾತೆ ಪಡೆದು ಕಾಂಗ್ರೆಸ್ ನೆಗೆದು ಬೀಳುವಂತೆ ಮಾಡುತ್ತೇನೆ: ಕೆಎಸ್ ಈಶ್ವರಪ್ಪ

ಮುಂದಿನ ಬಾರಿ ಮುಜರಾಯಿ ಖಾತೆ  ಪಡೆದು ಕಾಂಗ್ರೆಸ್ ನೆಗೆದು ಬೀಳುವಂತೆ ಮಾಡುತ್ತೇನೆ: ಕೆಎಸ್ ಈಶ್ವರಪ್ಪ
ಬೆಳಗಾವಿ , ಬುಧವಾರ, 15 ನವೆಂಬರ್ 2017 (09:56 IST)
ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಸದನದ ಮೇಲ್ಮನೆಯಲ್ಲಿ ಮಂಗಳವಾರ ಮುಜರಾಯಿ ಇಲಾಖೆ ಕುರಿತು ಪ್ರಶ್ನೋತ್ತರ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು.

 
ಮುಜರಾಯಿ ಇಲಾಖೆ ಸಿಕ್ಕಿದ್ದೇ ನಿಮ್ಮ ಅದೃಷ್ಟ ಎಂದುಕೊಳ್ಳಿ. ಮುಜರಾಯಿ ಇಲಾಖೆ ಎಂದರೆ ದೇವರ ಕೆಲಸ ಎಂದು ಈಶ್ವರಪ್ಪ, ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿಗೆ ಛೇಡಿಸಿದರು.

ಈ ಸಂದರ್ಭದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮುಜರಾಯಿ ಇಲಾಖೆ ಸಿಕ್ಕಿದರೆ ಚುನಾವಣೆಯಲ್ಲಿ ಸೋಲಾಗುತ್ತದೆ ಎಂಬ ಇತಿಹಾಸವಿದೆಯಲ್ಲವೇ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಮುಂದಿನ ಬಾರಿ ಮುಜರಾಯಿ ಖಾತೆಯನ್ನೇ ಕೇಳಿ ಪಡೆಯುತ್ತೇನೆ ಎಂದರು.

ನನಗೆ ಆ ಖಾತೆ, ಈ ಖಾತೆ ಎಂದೇನಿಲ್ಲ. ಇದುವರೆಗೆ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಮುಂದಿನ ಬಾರಿ ಮುಜರಾಯಿ ಇಲಾಖೆಯನ್ನೇ ಕೇಳಿ ಪಡೆಯುತ್ತೇನೆ. ಅದು ನನ್ನ ಸೌಭಾಗ್ಯ ಎಂದುಕೊಳ್ಳುತ್ತೇನೆ. ನಾನು ಮುಜರಾಯಿ ಇಲಾಖೆಗೆ ಬಂದರೆ ಕಾಂಗ್ರೆಸ್ ನೆಗೆದು ಬಿದ್ದು ಹೋಗುವಂತೆ ಮಾಡುತ್ತೆನೆ’ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಸಿಡಿ ನಂತರ ಹಾರ್ದಿಕ್ ಪಟೇಲ್ ಗೆ ಮತ್ತೊಂದು ಶಾಕ್