Select Your Language

Notifications

webdunia
webdunia
webdunia
webdunia

ಸಿಕ್ಕ ಖಾತೆಯಲ್ಲಿ ಸ್ಪಷ್ಟನೆಯಿಲ್ಲ ಎಂದು ಕ್ಯಾತೆ ತೆಗೆದ ಕೃಷ್ಣ ಭೈರೇಗೌಡ

Krishna ByreGowda
ನವದೆಹಲಿ: ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ರಚಿಸಲಾದ ಸಚಿವ ಸಂಪುಟದ ಬಗ್ಗೆ ಕೈ ನಾಯಕರಲ್ಲಿ ಅಸಮಾಧಾನಗಳು ವ್ಯಕ್ತವಾಗುತ್ತಲೇ ಇದೆ.  ಇದೀಗ ಸಚಿವ ಸ್ಥಾನಕ್ಕಾಗಿ ತ್ರೀವ ಪೈಪೋಟಿ ಶುರುವಾಗಿದೆ. 

ಈ ನಡುವೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಚಿವ ಸ್ಥಾನ ಪಡೆದುಕೊಂಡಿರುವ ಕೃಷ್ಣ ಭೈರೇಗೌಡ ಅವರು ಬಿಡಿಎ ಮತ್ತು ಬಿಎಂಆರ್‌ಡಿಎ ಅಧಿಕಾರ ಸಿಗದ ಹಿನ್ನಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. 

ಸ್ಪಷ್ಟನೆ ಸಿಗುವವರೆಗೂ ಖಾತೆ ಸ್ವೀಕರಿಸದಿರಲು ನಿರ್ಧರಿಸಿರುವ ಅವರು ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಈ ಸಂಬಂಧ ಒತ್ತಡ ಹೇರುವ ಯತ್ನ ಮಾಡಿದ್ದಾರೆ. 

ಈ ಸಂಬಂಧ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ ಅವರು, ಜವಾಬ್ದಾರಿ ವಹಿಸುವಾಗ, ಜವಾಬ್ದಾರಿಯಲ್ಲಿ ಸ್ಪಷ್ಟನೆ ಇದ್ದರೆ ಕೆಲಸ ಮಾಡಲು ಅನುಕೂಲವಾಗುತ್ತದೆ.  ಇಲ್ಲದೆ ಹೋದಲ್ಲಿ ನಿರೀಕ್ಷೆಯ ಮಟ್ಟಿಗೆ ಕೆಲಸ ಮಾಡಲು ಆಗುವುದಿಲ್ಲ. ನಿರೀಕ್ಷೆಗೆ ತಕ್ಕ ಹಾಗೇ ಫಲಿತಾಂಶವನ್ನು ಪಡೆಯಕ್ಕೆ ಆಗುವುದಿಲ್ಲ. 

ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೂ ಹೇಳಿದ್ದು, ಅವರ ತೀರ್ಮಾನ ನೋಡಿಕೊಂಡು ಮುಂದಿನ ಕೆಲಸವನ್ನು ಮಾಡುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಹೇಗಿರಲಿದೆ ಗೊತ್ತಾ ಬೆಂಗಳೂರಿನ ಹವಾಮಾನ