Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ದೂರು

crime news

geetha

bangalore , ಬುಧವಾರ, 28 ಫೆಬ್ರವರಿ 2024 (15:31 IST)
ಬೆಂಗಳೂರು-ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ವಿಧಾನಸೌಧ ಪೊಲೀಸ್ ಠಾಣೆಗೆ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್  ದೂರು ನೀಡಿದ್ದಾರೆ.ವಿಧಾನ ಸೌಧ ನಾಸೀರ್ ಹುಸೇನ್  ಬೆಂಬಲಿಗರು , ಪಾಕ್ ಪರ ಘೋಷಣೆ ಕೂಗಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.ಮತ್ತೊಂದು ಕಡೆ  ನಾಸೀರ್ ಸಾಬ್ ಜಿಂದಬಾದ್  ಘೋಷಣೆ ಎನ್ನಲಾಗುತ್ತಿದೆ.ಪೊಲೀಸರು ಇದರ ಸತ್ಯಾಸತ್ಯತೆ ತಿಳಿಯಲು ಎಫ್ ಎಸ್ ಎಲ್ ರಿಪೋರ್ಟ್ ಮೊರೆ ಹೋಗಿದ್ದಾರೆ.ಈ ಪ್ರಕರಣವನ್ನು ಪೊಲೀಸರು ಸೂಕ್ತ ತನಿಖೆ ಮಾಡಬೇಕು.
 
ನಮ್ ರಾಷ್ಟ್ರದಲ್ಲಿ ಇದ್ದುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗೋದು ತಪ್ಪು.ಯಾರೇ ತಪ್ಪು ಮಾಡಿದ್ರೂ ತಪ್ಪೇ, ಒಂದು ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.ನಿನ್ನೆ ಇದೇ ವಿಚಾರ ಕ್ಕೆ ಬಿಜೆಪಿಯವರು, ಕಾಂಗ್ರೆಸ್ ಕಚೇರಿ ಬಳಿ‌ ಪ್ರತಿಭಟನೆ ನಡೆಸಿದ್ದಾರೆ.ಅವರ ಬಳಿ ದಾಖಲೆ ಇದ್ರೆ ಪೊಲೀಸರಿಗೆ ಕೊಡಿ , ಅದು ಬಿಟ್ಟು ನಮ್ ಕಚೇರಿ ಮುಂದೆ ಪ್ರತಿಭಟನೆ ಮಾಡೋದು ತಪ್ಪು.ಈ ಮೂಲಕ ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಮಾಡ್ತಿನಿ ಎಂದು ಮನೋಹರ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ಗೂ ತಟ್ಟಿದ ನೀರಿನ ಬಿಸಿ