ಕೋಲಾರ ನವ ವಧು, ವರ ಹೊಡೆದಾಟ ಕೇಸ್ ಗೆ ಮತ್ತೊಂದು ಟ್ವಿಸ್ಟ್: ಮರಣೋತ್ತರ ಪರೀಕ್ಷೆಯಲ್ಲಿದೆ ಶಾಕಿಂಗ್ ವಿಚಾರ

Krishnaveni K
ಶುಕ್ರವಾರ, 9 ಆಗಸ್ಟ್ 2024 (11:03 IST)
ಬೆಂಗಳೂರು: ಕೋಲಾರದಲ್ಲಿ ನವ ವಧು ಮತ್ತು ವರ ಹೊಡೆದಾಡಿಕೊಂಡು ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶಾಕಿಂಗ್ ವಿಚಾರಗಳು ಬಯಲಾಗಿದೆ.

ಮದುವೆಯಾದ ಕೆಲವೇ ಕ್ಷಣದಲ್ಲಿ ರೂಂ ಬಾಗಿಲು ಹಾಕಿಕೊಂಡು ವಧು ಲಿಖಿತ ಶ್ರೀ ಮತ್ತು ವರ ನವೀನ್ ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಗಂಭೀರ ಗಾಯಗೊಂಡ ಲಿಖಿತ ಶ್ರೀ ಮೊನ್ನೆಯೇ ಸಾವನ್ನಪ್ಪಿದ್ದಳು. ಗಾಯಗೊಂಡಿದ್ದ ನವೀನ್ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಈ ಪ್ರಕರಣದ ಬಗ್ಗೆ ಲಿಖಿತ ಶ್ರೀ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದರು. ಇಬ್ಬರೂ ಹೊಡೆದಾಡಿಕೊಂಡಿದ್ದು ಅಲ್ಲ, ಯಾರೋ ಮೂರನೆಯ ವ್ಯಕ್ತಿ ಹೊಡೆದು ಹಾಕಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು. ಈ ಪ್ರಕರಣವನ್ನು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ವರದಿಯಲ್ಲಿ ವಧು ಲಿಖಿತ ಬಲ ಅಂಗೈ ಮತ್ತು ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಬಲವಾದ ಏಟು ಬಿದ್ದಿರುವುದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆಕೆಯ ಸಾವಾಗಿದೆ. ಇನ್ನು ವರ ನವೀನ್ ನೆತ್ತಿಯ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದೆ. ಮರಣೋತ್ತರ ವರದಿ ಪ್ರಕಾರ ನವೀನ್ ಗೆ ಲಿಖಿತ ಹೊಡೆದಿರುವ ಸಾಧ್ಯತೆಯಿಲ್ಲ. ಲಿಖಿತಗೆ ಹೊಡೆದ ಮೇಲೆ ನವೀನ್ ತನಗೆ ತಾನೇ ಗಾಯ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ. ಇದೀಗ ಇಬ್ಬರ ಕಾಲ್ ಡೀಟೈಲ್ಸ್ ಪತ್ತೆ ಮಾಡಿ ಪೊಲೀಸರು ಮೂರನೆಯವರ ಕೈವಾಡವಿದೆಯೇ ಎಂದು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ವೀರಪ್ಪನ್ ಆಗಿದ್ದಾಗ ಕಾಡು ಸೇಫ್ ಆಗಿತ್ತು: ಅರಣ್ಯ ಸಚಿವರಿಗೆ ರೈತರ ಅಳಲು

ಆರ್ ಎಸ್ಎಸ್ ಗೆ ಡೊನೇಷನ್ ಎಲ್ಲಿಂದ ಎಂದ ಪ್ರಿಯಾಂಕ್ ಖರ್ಗೆ: ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಎಂದ ಪಬ್ಲಿಕ್

Karnataka Weather: ಮಳೆ ಮುಗಿದೇ ಹೋಯ್ತು ಎಂದುಕೊಳ್ಳಬೇಡಿ, ಈ ಎಚ್ಚರಿಕೆ ಗಮನಿಸಿ

ವಾರ್ನಿಂಗ್ ಕೊಡಲು ಹೋಗಿ ಮಹತ್ವದ ಸುಳಿವು ಬಿಟ್ಟುಕೊಟ್ರಾ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments