Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಯುವಕನನ್ನು ಅಪಹರಣ ಮಾಡಿಸಿದ ಡಿವೈಎಸ್‌ಪಿ

10 ಲಕ್ಷ
ಚಿಕ್ಕಮಗಳೂರು , ಸೋಮವಾರ, 4 ಜುಲೈ 2016 (18:27 IST)
10 ಲಕ್ಷ ರೂಪಾಯಿ ಹಣಕ್ಕಾಗಿ ರೌಡಿಗಳನ್ನು ಬಿಟ್ಟು ಡಿವೈಎಸ್‌ಪಿಯೊಬ್ಬರು ಅಪಹರಣ ಮಾಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
 
ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಹಣಕ್ಕಾಗಿ ತೇಜಸ್ ಎಂಬ ಯುವಕನನ್ನು ಅಪಹರಣ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಕುರಿತಂತೆ ಅವರನ್ನು ಅಮಾನತು ಮಾಡಿ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠ ಸಂತೋಷ್ ಬಾಬು ಆದೇಶ ಹೊರಡಿಸಿದ್ದಾರೆ.
 
ಹೋಮ್ ಸ್ಟೇವೊಂದರಲ್ಲಿ ತೇಜಸ್ ಗೌಡ ಮತ್ತು ಆತನ ಸ್ನೇಹಿತರು ಇಸ್ಪೇಟ್ ಆಡುತ್ತಿದ್ದರು. ಈ ಸಮಯದಲ್ಲಿ  ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ತೇಜಸ್ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದು, ನಂತರ ಜೂನ್ 27ರಂದು ಅವರನ್ನು ಅಪಹರಿಸಲಾಗಿತ್ತು. 
 
ನಂತರ ಡಿವೈಎಸ್‌ಪಿ  ಕಲ್ಲಪ್ಪ ಹಂಡಿಬಾಗ್ 10 ಲಕ್ಷ ರೂಪಾಯಿ ಹಣ ತಲುಪಿಸುವಂತೆ ಕರೆ ಮಾಡಿ ತಿಳಿಸಿದ್ದರು.  ತೇಜಸ್ ಸ್ನೇಹಿತ ಪವನ್ 10 ಲಕ್ಷ ರೂಪಾಯಿ ತಲುಪಿಸಿದ್ದ. ನಂತರ ತೇಜಸ್ ಡಿವೈಎಸ್‌ಪಿ ವಿರುದ್ಧ ದೂರು ದಾಖಲಿಸಿದ್ದು, ತನಿಖೆಯ ಬಳಿಕ ವಿಷಯ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೇಲ್ಮನೆಗೆ ಘನತೆ ಗೌರವ ತರುತ್ತೇನೆ: ಜಿ.ಪರಮೇಶ್ವರ್