Select Your Language

Notifications

webdunia
webdunia
webdunia
webdunia

ಮೇಲ್ಮನೆಗೆ ಘನತೆ ಗೌರವ ತರುತ್ತೇನೆ: ಜಿ.ಪರಮೇಶ್ವರ್

ಮೇಲ್ಮನೆ
ಬೆಂಗಳೂರು , ಸೋಮವಾರ, 4 ಜುಲೈ 2016 (18:01 IST)
ಮೇಲ್ಮನೆಯ ಘನತೆ ಮತ್ತು ಕೀರ್ತಿ ಹೆಚ್ಚಿಸುವಂತಹ ಕೆಲಸ ಮಾಡುತ್ತೇನೆ ಎಂದು ರಾಜ್ಯ ಗೃಹ ಖಾತೆ ಸಚಿವ ಹಾಗೂ ಸಭಾನಾಯಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
 
ಇಂದು ಆರಂಭವಾಗಿರುವ ಮೇಲ್ಮನೆ ಕಲಾಪದ ಸಭಾನಾಯಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ರಾಜ್ಯ ಗೃಹ ಖಾತೆ ಸಚಿವ ಹಾಗೂ ಸಭಾನಾಯಕ ಡಾ.ಜಿ.ಪರಮೇಶ್ವರ್, ಹಿರಿಯರ ಮನೆಯಾಗಿರುವ ವಿಧಾನ ಪರಿಷತ್ ಘನತೆಗೆ ದಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
 
ಹಿಂದೆ ಸಭಾನಾಯಕರಾಗಿದ್ದ ಎಸ್‌.ಆರ್.ಪಾಟೀಲ್ ಅವರು ಸಭಾನಾಯಕರ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವಿಶ್ವಾಸದೊಂದಿಗೆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆಂದು ತಿಳಿಸಿದರು.
 
ಇದೇ ವೇಳೆ ಹಾಸ್ಯ ಚಟಾಕಿ ಸಿಡಿಸಿರುವ ರಾಜ್ಯ ಗೃಹ ಖಾತೆ ಸಚಿವ ಹಾಗೂ ಸಭಾನಾಯಕ ಡಾ.ಜಿ.ಪರಮೇಶ್ವರ್, ನಾನು ಪರಮೇಶ್ವರ್, ವಿಪಕ್ಷ ನಾಯಕ ಈಶ್ವರ್ ಮೇಲೆ ಕುಳಿತಿರುವವರು ಶಂಕರ ಎಂದು ಹೇಳಿದರು. ಮಧ್ಯ ಪ್ರವೇಶಿಸಿದ ಸದಸ್ಯೆ ಮೋಟಮ್ಮ ಎಲ್ಲಾ ಶಂಕರಮಯ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಸಭಾಪತಿಯಾಗಿ ಕೆ.ಬಿ.ಕೋಳಿವಾಡ್ ಆಯ್ಕೆ?