Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಕಾಲ್ ಗರ್ಲ್ ಸೇರಿ ಇಬ್ಬರು ವ್ಯಕ್ತಿಗಳ ಕಿಡ್ನಾಪ್

Webdunia
ಮಂಗಳವಾರ, 21 ಫೆಬ್ರವರಿ 2023 (19:37 IST)
ಕಾಲ್​ ಗರ್ಲ್​ ಆಗಿ ಬಂದವಳು ಕಿಡ್ನ್ಯಾಪರ್​ ಆದ ಕಥೆ ಇದು.ಅತಿಯಾಸೆಗೆ ಬಿದ್ದಿದ್ದ ಯುವತಿ ತನ್ನದೇ ಗಿರಾಕಿಯನ್ನ ಅಪಹರಿಸಿದ್ದಳು. ಬೇರೆಯದ್ದೇ  ಪ್ರಕರಣ ಎಂದುಕೊಂಡಿದ್ದ ಕಥೆಗೆ ಬೇರೆಯದ್ದೇ ಟ್ವಿಸ್ಟ್​ ಸಿಕ್ಕಿದೆ. ಯಸ್​ ಕಾಲ್​ ಗರ್ಲ್​ ಆ್ಯಂನಡ್​ ಗ್ಯಾಂಗ್​ ಈಗ ಅಂದರ್​. ಪ್ರಿಯಾ , ತಿರುಮಲೇಶ್​ , ನವೀನ್ , ಕೆಂಪರಾಜ್ , ಮುಖೇಶ, ಮಂಜುನಾಥ್ , ಭರತ್ ಮತ್ತು ದಲ್ಪೀರ್ ಸಾಹುದ್. ಇಷ್ಟೂ ಜನರ ಗ್ಯಾಂಗ್​ ರಜನಿಕಾಂತ್​ ಎಂಬಾತನನ್ನ ಕಿಡ್ನ್ಯಾಪ್​ ಮಾಡಿತ್ತು. ಐದು ಲಕ್ಷ ಕೊಡದಿದ್ದರೆ ಹೆಣವೂ ಸಿಗೋದಿಲ್ಲ ಎಂದು ಧಮ್ಕಿ ಬೇರೆ ಹಾಕಿದ್ರು. ರಜನಿಕಾಂತ್​ ಜೊತೆ ಯುವತಿ ಕೂಡ ಕಿಡ್ನ್ಯಾಪ್​ ಆಗಿದ್ದಾರೆಮದು ನಂಬಿ ಪೊಲೀಸರು ನಿರಂತರ ಹುಡುಕಾಟ ನಡೆಸಿದಾಗ ಮಂಡ್ಯದ ಬಳಿ ಸಿಕ್ಕಿಬಿದ್ದರು. ಖಡಕ್ಕಾಗಿ ವಿಚಾರಣೆ ನಡೆಸಿದಾಗ ಸಿಕ್ಕಿಬಿದ್ದವರು ಬೊಟ್ಟು ಮಾಡಿ ತೋರಿಸಿದ್ದು, ಪ್ರಮುಖ ಆರೋಪಿತೆ ಪ್ರಿಯ ಕಡೆಗೆ.

ಮಂಜುನಾಥ್​ ಆ್ಯಪ್​ ಆಧಾರಿತ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. ಈತನಿಗೆ ಆಪ್ತ ಸ್ನೇಹಿತನಾಗಿರುವವನೇ ರಜನಿಕಾಂತ್​ . ಈ ರಜನಿಕಾಂತ್​ ಹಾಗು ಮಂಜುನಾಥ್​ ಇಬ್ಬರು ಸೇರಿ ಯುವತಿಯೊಬ್ಬಳನ್ನ ಬುಕ್​ ಮಾಡಿದ್ದರು.ಆಕೆಗೆ ಪಿಕಪ್​ ಪಾಯಿಂಟ್​​ ತಿಳಿಸಿ ಟೈಮಿಂಗ್​ ಹೇಲಿಟ್ಟಿದ್ದರು. ಅದಕ್ಕೂ ಮುನ್ನ ಕಂಠ ಮಟ್ಟ ಕುಡಿದು ತಮ್ಮದೇ ಕ್ಯಾಬ್​ನಲ್ಲಿ  ಕೆಂಗೇರಿಯಲ್ಲಿ ಯುವತಿಯನ್ನ ಪಿಕ್​ ಮಾಡಿ ರಜನಿಕಾಂತ್​ ನ ಮನೆ ಬಳಿ ಇರುವ ದೇವರಚಿಕ್ಕನಹಳ್ಳಿಗೆ ಬಂದು  ಅದೇ ದಿನ 11-30 ರ ಸಂಧರ್ಭದಲ್ಲಿ ಓಯೋ ರೂಂನಲ್ಲಿ ಕಾಲ ಕಳೆದಿದ್ದಾರೆ. ಸುಮಾರು ತಡರಾತ್ರಿ 1-30 ರ ಬಳಿಕ ಯುವತಿಯನ್ನ ಡ್ರಾಪ್​ ಮಾಡುವ ಸಲುವಾಗಿ ತಮ್ಮ ಕ್ಯಾಬ್​ನಲ್ಲಿ  ದೇವರ ಚಿಕ್ಕನಹಳ್ಳಿ ಬಳಿ ತೆರಳುತ್ತಿದ್ದಂತೆ ಡಿಯೋ ಬೈಕ್ ಬಂದ ನಾಲ್ವರು ಕಾರನ್ನು ಅಡ್ಡ ಹಾಕಿದ್ದಾರೆ. ಗಾಡಿಗೆ ಗುದ್ದಿದ್ಯಾ ಎಂದು ಹೇಳಿ ಅವಾಚ್ಯ ಶಭ್ಧಗಳಿಂದ ನಿಂದಿಸಿ ಅದೇ ಕಾರಿನಲ್ಲಿ ಬಲವಂತವಾಗಿ ಹತ್ತಿಕೊಂಡು ಹೋಗುವ ಸಂಧರ್ಬದಲ್ಲಿ ಮಂಜುನಾಥ್​ ಕೋಳಿಫಾರಂ ಸರ್ಕಲ್​ ಬಳಿ ಕಾರಿನಿಂದ ಜಿಗಿದಿದ್ದಾನೆ. ನಂತರ ಇನ್ನೋವಾ ಕಾರ್​ ಡ್ರೈವರ್​ ಬಳಿ ಮೊಬೈಲ್​ ತೆಗೆದುಕೊಂಡು ಕಂಟ್ರೋಲ್​ ರೂಂಗೆ ಕರೆ ಮಾಡಿ ದೂರು ನೀಡಿದ್ದ. ಇತ್ತ ಮಂಜುನಾಥ್​ ಜಿಗಿಯುತ್ತಿದ್ದಂತೆ ಅದೇ ಕ್ಯಾಬಿನಲ್ಲಿ ರಜನಿಕಾಂತ್​ ಹಾಗು ಯುವತಿಯನ್ನ ಕೂರಿಸಿಕೊಮಡು ಎಸ್ಕೇಪ್​ ಆಗಿದ್ದಾರೆ. ಇತ್ತ ಅನ್ಯಾಯವಾಗಿ ತನ್ನ ಸ್ನೇಹಿತನ ಜೊತೆ ಯುವತಿ ಕೂಡ ಕಿಡ್ನ್ಯಾಪ್​ ಆಗಿದ್ದಾಳಲ್ಲ ಎಂದು ಮಂಜುನಾಥ್​ ಕೊರಗುತ್ತಿದ್ದರೆ ಅತ್ತ ಕಿಡ್ನ್ಯಾಪ್​ ನ ಹಿಂದಿನ ಕೈ ಆ ಯುವತಿಯದ್ದೆ ಎಂದು ಬಂಧನದ ಬಳಿಕ ತಿಳಿದುಬಂದಿದೆ. ಯಸ್​  ಪ್ರಕರಣ  ವಿಚಾರಣೆ ನಡೆಸಿದಾಗ  ಮಂಜುನಾಥ್​ ಹಾಗು ರಜನಿಕಾಂತ್​ ಇಬ್ಬರ ಜೊತೆ ಇದ್ದಾಗಲೇ ಯುವತಿ ಒಯೋ ರೂಂನ ಲೊಕೇಷನ್​ ತನ್ನ ಗ್ಯಾಂಗ್​ಗೆ ಸೆಂಡ್​ ಮಾಡಿದ್ದಳು. ನಂತರ ಫಾಲೋ ಮಾಡಿದ್ದ ಆಕೆಯ ಗ್ಯಾಂಗ್​ ಇಬ್ಬರನ್ನೂ ಕಿಡ್ನ್ಯಾಪ್​ ಮಾಡುವ ಉದ್ದೇಶ ಹೊಂದಿತ್ತು. ಆದ್ರೆ ಮಂಜುನಾಥ್​ ಎಸ್ಕೇಪ್​ ಆದ ಹಿನ್ನಲೆ ರಜನಿಕಾಂತ್​ನನ್ನ ಕಿಡ್ನ್ಯಾಪ್​ ಮಾಡಿ  ಐದು ಲಕ್ಷ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದಾರೆ. ಇನ್ನು ಈ ಗ್ಯಾಂಗ್​ನ ಕೃತ್ಯ ಇದು ಮೊದಲೇನಲ್ಲಿ ಈ ಹಿಂದೆ ಕೂಡ ಮೂರು ಇಂತಹ ಕೃತ್ಯಗಳನ್ನ ನಡೆಸಿರುವುದು ಬೆಳಕಿಗೆ ಬಂದಿದೆ .

ಇನ್ನು ಕೆಲವೊಂದು ಸೆಕ್ಷುವಲ್​ ಸರ್ವಿಸ್​ ಗಳನ್ನ ಕಾಂಟಾಕ್ಟ್​ ಮಾಡಿದಾಗ ಇಂತಹ  ಘಟನೆಗಳು ನಡೆಯುವುದು ಸಹಜ. ಇಲ್ಲಿ ಕೃತ್ಯದ ಬಗ್ಗೆ ಹೇಳೋದಕ್ಕೂ  ಮುಜುಗರ ಪಡುವಂತಹ ವಿಚಾರವಾದ್ದರಿಂದ ಹೆಚ್ಚು ಜನ ದುರು ಕೊಡಲು ಹೋಗೊದಿಲ್ಲ ಎಂಬುದನ್ನ ಅರಿತಿರುವ ಆರೋಪಿಗಳು ಈ ರೀತಿಯ ಕೃತ್ಯಕ್ಕೆ ಮುಂದಾಗ್ತಾರೆ. ಸದ್ಯ ಈ ಸಂಬಂಧ ಬೇಗೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ .
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments