Select Your Language

Notifications

webdunia
webdunia
webdunia
webdunia

ತುಳುವಿನಲ್ಲಿ ಮಾತನಾಡಿ ತುಳುವರ ಮನಗೆದ್ದ ಕಿಚ್ಚ ಸುದೀಪ್

Kiccha Sudeep

Krishnaveni K

ಮಂಗಳೂರು , ಮಂಗಳವಾರ, 28 ಮೇ 2024 (11:07 IST)
Photo Credit: X
ಮಂಗಳೂರು: ಕರಾವಳಿ ನಾಡು ಮಂಗಳೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕಿಚ್ಚ ಸುದೀಪ್ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ತುಳುವಿನ ನಂಟಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ತಾಯಿ ಮಂಗಳೂರಿನವರು. ಹೀಗಾಗಿ ನಾನು ಈ ಊರಿಗೆ ಹೊರಗಿನವಲ್ಲ ಎಂದಿದ್ದಾರೆ.

ನನ್ನ ತಾಯಿ ಮಂಗಳೂರಿನವರು. ನನ್ನ ತಂದೆಗೆ ಊರೆಲ್ಲಾ ಸುತ್ತಿದರೂ ಕೊನೆಗೆ ಮಂಗಳೂರಿನ ಹುಡುಗಿಯೇ ಇಷ್ಟವಾದು ನೋಡಿ. ನನ್ನ ತಾಯಿ ಚೆನ್ನಾಗಿ ತುಳು ಮಾತನಾಡುತ್ತಾರೆ. ಮುಂದಿನ ಸಲ ಅವರನ್ನೇ ಕಳುಹಿಸುತ್ತೇನೆ. ಆದರೆ ನನಗೆ ಅವರು ಹೇಳಿಕೊಟ್ಟಿದ್ದು ಎರಡೇ ಪದ. ‘ಎಂಬ ಉಲ್ಲಾರ್? ಒಣಸಾಂಡ’ ಎಂದಷ್ಟೇ ನನಗೆ ಕಲಿಸಿರುವುದು ಎಂದಿದ್ದಾರೆ.

ವೇದಿಕೆಯ ಮೇಲೆ ಕರಾವಳಿ ಕಲೆಯನ್ನು ನೋಡಿ ಕ್ಲೀನ್ ಬೋಲ್ಡ್ ಆದ ಕಿಚ್ಚ ಸುದೀಪ್, ನನಗೆ ಈ ಜನ್ಮದಲ್ಲಿ ಆ ರೀತಿ ಸುತ್ತಕ್ಕಾಗಲ್ಲ. ಹೊರಗಡೆ ಜನ ನನ್ನನ್ನು ಪ್ರೀತಿಯಿಂದ ಬಾದ್ ಶಹಾ, ಅಭಿನಯ ಚಕ್ರವರ್ತಿ ಎಂದು ಏನೇ ಹೇಳಬಹುದು. ಆದರೆ ಇಂತಹ ಪ್ರತಿಭಾವಂತರನ್ನು ನೋಡಿದಾಗ ನಾವು ತುಂಬಾ ಚಿಕ್ಕವರು ಎನಿಸುತ್ತದೆ ಎಂದು ಹಾಡಿ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಟಚ್ ಆಗಿದ್ದಕ್ಕೆ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರ ನಡುವೆ ದಾಳಿ