Select Your Language

Notifications

webdunia
webdunia
webdunia
webdunia

ಧರ್ಮಸಿಂಗ್ ಸಾವಿನ ಸುದ್ದಿ ತಿಳಿದು ಕಣ್ಣೀರು ಹಾಕಿದ ಖರ್ಗೆ

ಧರ್ಮಸಿಂಗ್ ಸಾವಿನ ಸುದ್ದಿ ತಿಳಿದು ಕಣ್ಣೀರು ಹಾಕಿದ ಖರ್ಗೆ
ನವದೆಹಲಿ , ಗುರುವಾರ, 27 ಜುಲೈ 2017 (13:14 IST)
ಆತ್ಮಿಯ ಸ್ನೇಹಿತ ಮಾಜಿ ಸಿಎಂ ಧರ್ಮಸಿಂಗ್ ಸಾವಿನ ಸುದ್ದಿ ತಿಳಿದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಕಣ್ಣೀರು ಹಾಕಿದ್ದಾರೆ.
 
ಧರ್ಮಸಿಂಗ್ ನಿಧನ ದೊಡ್ಡ ಆಘಾತ ತಂದಿದೆ. ಕುಟುಂಬದ ದೊಡ್ಡಣ್ಣ ನಮ್ಮನ್ನು ಬಿಟ್ಟು ಹೊದಂತಾಗಿದೆ. ಅವರ ಅಗಲಿಕೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
 
ಕಳೆದ ಐದು ದಶಕಗಳಿಂದ ನಾವು ಪರಸ್ಪರರು ಒಂದಾಗಿ ಹೋರಾಟ ಮಾಡಿದ್ದೇವೆ. ಸಚಿವ ಸ್ಥಾನಗಳನ್ನು ಅಲಂಕರಿಸಿ ಜನ ಸೇವೆ ಮಾಡಿದ್ದೇವೆ. ಅವರೊಬ್ಬ ಅಜಾತ ಶತ್ರು ಯಾರೊಂದಿಗೂ ವೈರತ್ವ ಬೆಳಿಸಿಕೊಂಡಿದ್ದಲ್ಲ ಎಂದು ಹೇಳಿದ್ದಾರೆ.
 
ಧರ್ಮಸಿಂಗ್ ಅವರ ಕುಟುಂಬಕ್ಕೆ ದೇವರು ಕಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ