Publish Date: Thu, 23 May 2019 (10:33 IST)
Updated Date: Thu, 23 May 2019 (12:18 IST)
ಕೈ ಪಾಳೆಯದ ಭದ್ರ ಕೋಟೆಯಾಗಿರುವ ಕಲಬುರಗಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿನ್ನಡೆಯಾಗಿದೆ. ಬಿಜೆಪಿಯ ಉಮೇಶ್ ಜಾಧವ್ ಸಧ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ 50 ಸಾವಿರ ಮತಗಳಿಂದ ಮುಂದೆ ಇದ್ದಾರೆ.
ಲೋಕಸಭೆ ಚುನಾವಣೆಯ ಮತಎಣಿಕೆ ಆರಂಭಗೊಂಡಿದೆ. ಯುಪಿಎ ಮೈತ್ರಿ ಕೂಟ ಅಧಿಕ ಸೀಟ್ ಗೆಲ್ಲುತ್ತವಾ? ಇಲ್ಲವೇ ಎನ್ ಡಿಎ ಪಕ್ಷಗಳು ಅಧಿಕಾರಕ್ಕೆ ಮತ್ತೆ ಬರುತ್ತವಾ? ಅನ್ನೋದರ ಕುರಿತು ವೆಬ್ ದುನಿಯಾ ಕ್ಷಣ ಕ್ಷಣದ ಮಾಹಿತಿ ನಿಮ್ಮ ಮುಂದಿಡುತ್ತಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ.
ಮಂಡ್ಯದಲ್ಲಿ ನಿಖಿಲ್ ಮುನ್ನಡೆ, ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಗೆಲುವು, ಹಾಸನ ಎ.ಮಂಜು ಸೋಲು, ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡರಿಗೆ ಹಿನ್ನಡೆ, ಬಿ.ಕೆ.ಹರಿಪ್ರಸಾದ್ ಹಿನ್ನಡೆ, ಶೋಭಾ ಕರಂದ್ಲಾಜೆಗೆ ಗೆಲುವು. ಮೈಸೂರಲ್ಲಿ ಬಿಜೆಪಿ ಪ್ರತಾಪ್ ಸಿಂಹ ಮುನ್ನಡೆಯಲ್ಲಿದ್ದಾರೆ.
ಕ್ಷಣ ಕ್ಷಣದ ಲೋಕಸಭೆ ಚುನಾವಣೆ 2019 ರ ಫಲಿತಾಂಶಕ್ಕಾಗಿ ವೆಬ್ ದುನಿಯಾ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಲೋಕಸಭೆ ಚುನಾವಣೆ ಫಲಿತಾಂಶ 2019, ಕರ್ನಾಟಕ ಲೋಕಸಭೆ ಚುನಾವಣೆ ಫಲಿತಾಂಶ 2019, ಲೋಕಸಭೆ ಫಲಿತಾಂಶ 2019,