Select Your Language

Notifications

webdunia
webdunia
webdunia
webdunia

ಚಿನ್ನದ ಸರ ಕಿತ್ತೊಯ್ದ ಖದೀಮ

ಚಿನ್ನದ ಸರ ಕಿತ್ತೊಯ್ದ ಖದೀಮ
bangalore , ಭಾನುವಾರ, 7 ಆಗಸ್ಟ್ 2022 (19:54 IST)
ಮನೆ ಮುಂದೆ ರಂಗೋಲಿ ಹಾಕುವಾಗ ಖದೀಮ ಚಿನ್ನದ ಸರ ಕಿತ್ತೊಯ್ದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಅಕ್ಕಿ ಕುರುಬರ ಬೀದಿಯಲ್ಲಿ ನಡೆದಿದೆ. ಹೆಲ್ಮಟ್ ಧರಿಸಿ ಬಂದ ಅಪರಿಚಿತ ವ್ಯಕ್ತಿ ಸರಸ್ವತಿ ಎಂಬುವವರು ರಂಗೋಲಿ‌ ಬಿಡೋವಾಗ  ರಸ್ತೆಯಲ್ಲಿ ಮುಂದೆ ಹೋಗಿ, ಮತ್ತೆ ವಾಪಸ್ಸು ಬಂದು 40 ಗ್ರಾಂ ಚಿನ್ನದ ಸರ ಕಿತ್ತುಕೊಳ್ಳುತ್ತಾನೆ. ಆಗ ಮಹಿಳೆ ಕಿರಿಚಾಡುತ್ತಾಳೆ, ಅವಳಿಗೆ ಕಿರುಚಾಡಲು ಬಿಡದೆ ಬಾಯಿ ಮುಚ್ಚಿ ರಂಗೋಲಿಯನ್ನ ಮುಖದ ಮೇಲೆ ಎರಚಿ ಖದೀಮ ಎಸ್ಕೇಪ್‌ ಆಗುತ್ತಾನೆ. ಖದೀಮ ಹೊಂಚು ಹಾಕಿ,ಸರ ಕಿತ್ತು ಪರಾರಿಯಾಗೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದಾಗಿ 2 ತಿಂಗಳಿಗೆ 70 ಸಾವು..!