Webdunia - Bharat's app for daily news and videos

Install App

ಕೆಜಿಎಫ್ – 2 ಚಿತ್ರೀಕರಣ ಸ್ಥಗಿತ ಪ್ರಕರಣ: ವಿಚಾರಣೆ ಸೆ. 5ಕ್ಕೆ ಮುಂದೂಡಿಕೆ

Webdunia
ಶನಿವಾರ, 31 ಆಗಸ್ಟ್ 2019 (18:26 IST)
ಕೆಜಿಎಫ್ ಭಾಗ 2 ರ ಚಿತ್ರೀಕರಣ ಸ್ಥಗಿತದ ಆದೇಶ ಕುರಿತು ಕೋರ್ಟ್ ನಲ್ಲಿನ ಪ್ರಕರಣದ ಕುರಿತಾದ ವಿಚಾರಣೆಯನ್ನು ಮುಂದೂಡಲಾಗಿದೆ.

ಕೋಲಾರದ ಕೆಜಿಎಫ್ ನಗರದಲ್ಲಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಚಿತ್ರೀಕರಣ ಸ್ಥಗಿತದ ಕುರಿತಾದ ತಡೆಯಾಜ್ಞೆ ವಿಚಾರಣೆಯು ಸೆ.5 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ತಡೆಯಾಜ್ಞೆ ತೆರವು ಕೋರಿ ಚಿತ್ರ ತಂಡದ ಪರವಾಗಿ ಮನವಿ ಸಲ್ಲಿಸಿದ್ದರು ವಕೀಲ ಶಾಂತಿಭೂಷಣ್.
ಪರಿಸರ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಸ್ಥಳೀಯ ನ್ಯಾಯಾಲಯವು ಸೂಕ್ತ ವೇದಿಕೆಯಲ್ಲ ಎಂದು ವಕೀಲ ಶಾಂತಿಭೂಷಣ್ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಕೆಜಿಎಫ್ ನ ಸೈಯನೈಡ್ ಗುಡ್ಡದ ಪರಿಸರ ಹಾಳಾಗುತ್ತಿರುವ ದೂರಿನ ಹಿನ್ನಲೆಯಲ್ಲಿ ತಡೆಯಾಜ್ಞೆ ಕೊಟ್ಟಿತ್ತು ಕೋರ್ಟ್.
ಕೆಜಿಎಫ್ ನಿವಾಸಿ ಶ್ರೀನಿವಾಸ್ ಚಿತ್ರೀಕರಣ ಸ್ಥಗಿತ ಕೋರಿ ಮನವಿ ಸಲ್ಲಿಸಿದ್ದರು.

ಇಂದು ತಡೆಯಾಜ್ಞೆ ತೆರವಿಗೆ ಚಿತ್ರ ತಂಡದ ಪರವಾಗಿ ವಕೀಲ ಶಾಂತಿ ಭೂಷಣ್ ಮನವಿ ಮಾಡಿದರು.
ಸೆ.5 ಕ್ಕೆ ವಾದ ಮಂಡಿಸಲಿದ್ದಾರೆ ಶ್ರೀನಿವಾಸ್ ಪರ ವಕೀಲರು. ಕೋರ್ಟ್ ನಿರ್ದೇಶನದ ಮೇರೆಗೆ ಆ.27 ರಿಂದ ಸ್ಥಗಿತಗೊಂಡಿದೆ ಚಿತ್ರೀಕರಣ.

ನಟ ಯಶ್ ಅಭಿನಯದ ಬಹು ತಾರಾಗಣದ ಚಿತ್ರ ಕೆಜಿಎಫ್ ಚಾಪ್ಟರ್ - 2 ಚಿತ್ರ ಚಿತ್ರೀಕರಣ ಕುರಿತಾದ ಪ್ರಕರಣ ಇದಾಗಿದೆ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments