Webdunia - Bharat's app for daily news and videos

Install App

ಕೆಜಿಎಫ್ – 2 ಚಿತ್ರೀಕರಣ ಸ್ಥಗಿತ ಪ್ರಕರಣ: ವಿಚಾರಣೆ ಸೆ. 5ಕ್ಕೆ ಮುಂದೂಡಿಕೆ

Webdunia
ಶನಿವಾರ, 31 ಆಗಸ್ಟ್ 2019 (18:26 IST)
ಕೆಜಿಎಫ್ ಭಾಗ 2 ರ ಚಿತ್ರೀಕರಣ ಸ್ಥಗಿತದ ಆದೇಶ ಕುರಿತು ಕೋರ್ಟ್ ನಲ್ಲಿನ ಪ್ರಕರಣದ ಕುರಿತಾದ ವಿಚಾರಣೆಯನ್ನು ಮುಂದೂಡಲಾಗಿದೆ.

ಕೋಲಾರದ ಕೆಜಿಎಫ್ ನಗರದಲ್ಲಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಚಿತ್ರೀಕರಣ ಸ್ಥಗಿತದ ಕುರಿತಾದ ತಡೆಯಾಜ್ಞೆ ವಿಚಾರಣೆಯು ಸೆ.5 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ತಡೆಯಾಜ್ಞೆ ತೆರವು ಕೋರಿ ಚಿತ್ರ ತಂಡದ ಪರವಾಗಿ ಮನವಿ ಸಲ್ಲಿಸಿದ್ದರು ವಕೀಲ ಶಾಂತಿಭೂಷಣ್.
ಪರಿಸರ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಸ್ಥಳೀಯ ನ್ಯಾಯಾಲಯವು ಸೂಕ್ತ ವೇದಿಕೆಯಲ್ಲ ಎಂದು ವಕೀಲ ಶಾಂತಿಭೂಷಣ್ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಕೆಜಿಎಫ್ ನ ಸೈಯನೈಡ್ ಗುಡ್ಡದ ಪರಿಸರ ಹಾಳಾಗುತ್ತಿರುವ ದೂರಿನ ಹಿನ್ನಲೆಯಲ್ಲಿ ತಡೆಯಾಜ್ಞೆ ಕೊಟ್ಟಿತ್ತು ಕೋರ್ಟ್.
ಕೆಜಿಎಫ್ ನಿವಾಸಿ ಶ್ರೀನಿವಾಸ್ ಚಿತ್ರೀಕರಣ ಸ್ಥಗಿತ ಕೋರಿ ಮನವಿ ಸಲ್ಲಿಸಿದ್ದರು.

ಇಂದು ತಡೆಯಾಜ್ಞೆ ತೆರವಿಗೆ ಚಿತ್ರ ತಂಡದ ಪರವಾಗಿ ವಕೀಲ ಶಾಂತಿ ಭೂಷಣ್ ಮನವಿ ಮಾಡಿದರು.
ಸೆ.5 ಕ್ಕೆ ವಾದ ಮಂಡಿಸಲಿದ್ದಾರೆ ಶ್ರೀನಿವಾಸ್ ಪರ ವಕೀಲರು. ಕೋರ್ಟ್ ನಿರ್ದೇಶನದ ಮೇರೆಗೆ ಆ.27 ರಿಂದ ಸ್ಥಗಿತಗೊಂಡಿದೆ ಚಿತ್ರೀಕರಣ.

ನಟ ಯಶ್ ಅಭಿನಯದ ಬಹು ತಾರಾಗಣದ ಚಿತ್ರ ಕೆಜಿಎಫ್ ಚಾಪ್ಟರ್ - 2 ಚಿತ್ರ ಚಿತ್ರೀಕರಣ ಕುರಿತಾದ ಪ್ರಕರಣ ಇದಾಗಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಹಣ ವರ್ಗಾವಣೆ: ಸತೀಶ್ ಸೈಲ್‌ 2 ದಿನ ಇಡಿ ಕಸ್ಟಡಿಗೆ

ನೇಪಾಳದಲ್ಲಿ ಸಿಲುಕಿದ ಕನ್ನಡಿಗರೆಲ್ಲರೂ ಸುರಕ್ಷಿತರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Nepal Violence: ಮೃತರ ಸಂಖ್ಯೆ 25ಕ್ಕೆ ಏರಿಕೆ, ಎಲ್ಲ ವಿಮಾನ ನಿಲ್ದಾಣ ಬಂದ್‌

ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಶಾಸಕ ಪ್ರಭು ಚವಾಣ್‌ಗೆ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ

ಓಲೈಕೆಯಿಂದ ಜನರಿಗೆ ತೊಂದರೆ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments