Select Your Language

Notifications

webdunia
webdunia
webdunia
webdunia

ಕೇರಳ ತ್ಯಾಜ್ಯಕ್ಕೆ ಕರವೇ ಖಂಡನೆ

ಕೇರಳ ತ್ಯಾಜ್ಯಕ್ಕೆ ಕರವೇ ಖಂಡನೆ
ಕಲಬುರಗಿ , ಗುರುವಾರ, 17 ಜನವರಿ 2019 (15:00 IST)
ಕೇರಳದಿಂದ ಅನಧಿಕೃತ ತ್ಯಾಜ್ಯ ರವಾನೆಯಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕರ್ನಾಟಕದ ಗಡಿದಾಟಿ ಒಳನುಗ್ಗಿರುವ ಕೇರಳದ 2 ಲಾರಿಗಳನ್ನ ತಡೆದು ಪ್ರತಿಭಟನೆ ನಡೆಸಲಾಯಿತು.

ಕೊಳೆತ ಹಣ್ಣುಗಳು, ಮಾಂಸದ ತುಂಡುಗಳನ್ನು ಕರ್ನಾಟಕಕ್ಕೆ ತಂದು, ಗಡಿಭಾಗದ ಜಮೀನುಗಳಲ್ಲಿ ಸುರಿಯುವ ಯತ್ನ ನಡೆಸಲಾಗುತ್ತಿತ್ತು.

ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳಿದ್ದರೂ, ಒಳನುಗ್ಗಿರುವ ಲಾರಿಗಳ ಕ್ರಮಕ್ಕೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ತ್ಯಾಜ್ಯ ಕಳುಹಿಸುತ್ತಿರುವ ಕೇರಳ ರಾಜ್ಯಕ್ಕೆ ‌ಸರಕಾರ ಪತ್ರ ಬರೆಯುವಂತೆ ಒತ್ತಾಯಪಡಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 24ರಂದು ರಾಜ್ಯಾದ್ಯಂತ ಕೇಬಲ್ ಪ್ರಸಾರ ಸ್ಥಗಿತ