Publish Date: Fri, 09 Feb 2018 (12:05 IST)
Updated Date: Fri, 09 Feb 2018 (12:18 IST)
ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲೆ ಐಟಿ ಅಥವಾ ಇಡಿ ದಾಳಿ ವಿಚಾರ ಹಿನ್ನೆಲೆ, ಚುನಾವಣೆ ಲಾಭಕ್ಕಾಗಿ ಈ ಮಟ್ಟಿನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ನೋಡಿ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.
ದೇಶದ ಇತಿಹಾಸದಲ್ಲೇ ಇಂತಹ ದುರುಪಯೋಗ ನಡೆದಿಲ್ಲ.ಚುನಾವಣೆ ಗೆಲ್ಲಲು ಬಿಜೆಪಿಯಿಂದ ಐಟಿ ಮತ್ತು ಇಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದ ಜನರ ಬಗ್ಗೆ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಐಟಿ ಮತ್ತು ಇಡಿ ದಾಳಿ ಕುರಿತು ನಮಗೂ ಮಾಹಿತಿ ಇದೆ. ರಾಹುಲ್ ಪ್ರವಾಸ ಡೈವರ್ಟ್ ಮಾಡುವ ಯತ್ನ ನಡೆಯಲ್ಲ ಎಂದು ವೇಣುಗೋಪಾಲ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ