Select Your Language

Notifications

webdunia
webdunia
webdunia
webdunia

ಒಂದೇ ಹಂತಕ್ಕೆ ಅನ್ ಲಾಕ್ ಆಗಲ್ಲ ಕರ್ನಾಟಕ

ಒಂದೇ ಹಂತಕ್ಕೆ ಅನ್ ಲಾಕ್ ಆಗಲ್ಲ ಕರ್ನಾಟಕ
ಬೆಂಗಳೂರು , ಗುರುವಾರ, 10 ಜೂನ್ 2021 (09:21 IST)
ಬೆಂಗಳೂರು: ಜೂನ್ 14 ರ ಬಳಿಕ ಅನ್ ಲಾಕ್ ಆಗಿ ಎಲ್ಲವೂ ಮುಕ್ತವಾಗುತ್ತದೆ ಎಂದು ಕಾದು ಕುಳಿತಿದ್ದ ಜನರಿಗೆ ಸರ್ಕಾರ ಶಾಕ್ ನೀಡಿದೆ.


ಒಂದೇ ಹಂತದಲ್ಲಿ ಅನ್ ಲಾಕ್ ಮಾಡಿದರೆ ಕೊರೋನಾ ಒಮ್ಮೆಲೇ ಹೆಚ್ಚಳವಾಗುವ ಸಾಧ್ಯತೆಯಿದೆ. ಅದಲ್ಲದೆ, ಕೆಲವು ಜಿಲ್ಲೆಗಳಲ್ಲಿ ಈಗಲೂ ಕೊರೋನಾ ಸಂಖ್ಯೆ ಹೆಚ್ಚಿದೆ. ಹೀಗಾಗಿ ಒಮ್ಮೆಲೇ ಅನ್ ಲಾಕ್ ಮಾಡುವ ಬದಲು ಹಂತ ಹಂತವಾಗಿ ಅನ್ ಲಾಕ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ ಅಂತರ್ ಜಿಲ್ಲಾ ಓಡಾಟಕ್ಕೆ ಜೂನ್ 14 ರ ಬಳಿಕವೂ ನಿರ್ಬಂಧವಿರುವ ಸಾಧ್ಯತೆಯಿದೆ. ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ. ಇಂದು ಅಥವಾ ನಾಳೆ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸಂಕಷ್ಟದ ನಡುವೆ ಜನತೆಗೆ ವಿದ್ಯುತ್ ಶಾಕ್