Webdunia - Bharat's app for daily news and videos

Install App

ಕರ್ನಾಟಕದಲ್ಲಿ 2025 ರಲ್ಲಿ ಬೇಸಿಗೆಕಾಲ ಯಾವಾಗ ಆರಂಭ, ಎಷ್ಟು ತೀವ್ರವಾಗಲಿದೆ ಈ ಎಚ್ಚರಿಕೆ ಗಮನಿಸಿ

Krishnaveni K
ಸೋಮವಾರ, 10 ಫೆಬ್ರವರಿ 2025 (09:28 IST)
ಬೆಂಗಳೂರು: ಕರ್ನಾಟಕದಲ್ಲಿಈ ವರ್ಷ ಚಳಿಗಾಲ ಇನ್ನೇನು ಮುಗಿಯುತ್ತಾ ಬಂದಿದ್ದು ಇನ್ನೇನು ಬೇಸಿಗೆಕಾಲ ಶುರುವಾಗಲಿದೆ. ಈ ವರ್ಷ ಬೇಸಿಗೆ ಕಾಲ ಹೇಗಿರಲಿದೆ, ನೀವು ಗಮನದಲ್ಲಿರಿಸಬೇಕಾದ ವಿಚಾರಗಳು ಯಾವುವು ಇಲ್ಲಿ ನೋಡಿ.

ಹವಾಮಾನ ವರದಿ ಪ್ರಕಾರ ಇದೀಗ ಕರ್ನಾಟಕದಲ್ಲಿ ಹಗಲು ಬೇಸಿಗೆಯ ವಾತಾವರಣ, ರಾತ್ರಿ ತಂಪು ವಾತಾವರಣವಿರುತ್ತದೆ. ಒಣ ಹವೆಯಿರುವುದರಿಂದ ಚರ್ಮ ಒಣಗಿದಂತಾಗಿ, ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶ ಅಗತ್ಯವೆನಿಸುತ್ತಿದೆ.

ಈ ನಡುವೆ ಈ ವರ್ಷ ಚಳಿಗಾಲವೂ ತೀವ್ರವಾಗಿತ್ತು. ಮಳೆಗಾಲವೂ ಸುದೀರ್ಘವಾಗಿತ್ತು. ಹೀಗಾಗಿ ಬೇಸಿಗೆಯೂ ಅಷ್ಟೇ ತೀವ್ರವಾಗಿರಲಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಮಾರ್ಚ್ ನಿಂದ ನಿಜವಾದ ಬೇಸಿಗೆ ಕಾಲ ಆರಂಭವಾಗಲಿದೆ. ಈ ಬಾರಿ ಹಗಲು ಸೂರ್ಯನ ತಾಪ ವಿಪರೀತ ಎನಿಸುವ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣ ಹವೆ ಮತ್ತು ತೀವ್ರ ಬಿಸಿಲಿನಿಂದ ಕೂಡಿದ ಬೇಸಿಗೆಕಾಲವಿರಲಿದೆ.

ಈ ಬಾರಿಯೂ ಎಂದಿನಂತೆ ಬೇಸಿಗೆಕಾಲದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಯಾಗುವ ಸೂಚನೆಯಿದೆ. ಚರ್ಮ ಸಂಬಂಧೀ ಖಾಯಿಲೆಗಳು, ಡಿಹೈಡ್ರೇಷನ್ ನಿಂದ ಬರಬಹುದಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮತ್ತು ದೇಹವನ್ನು ಶುಚಿಯಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ. ಮೇ ತಿಂಗಳ ಕೊನೆಯವರೆಗೂ ಬೇಸಿಗೆ ಮುಂದುವರಿಯುವ ನಿರೀಕ್ಷೆಯಿದೆ. ಕೊನೆಯ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಕಷ್ಟದಲ್ಲಿ ಅಡಕೆ ಬೆಳೆಗಾರರು: ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ರಾಜ್ಯದ ಸಂಸದರು

Karnataka Weather: ಇಂದು ಮಳೆಯ ಅಬ್ಬರವಿರಲಿದೆಯಾ ಇಲ್ಲಿದೆ ಹವಾಮಾನ ವರದಿ

14ದಿನ ನ್ಯಾಯಾಂಗ ಬಂಧನಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಕಾನೂನಿನ ಮುಂದಿನ ನಡೆಯೇನು

ನವದೆಹಲಿ ಪೊಲೀಸ್ ಆಯುಕ್ತರಾಗಿ ಸತೀಶ್‌ ಗೋಲ್ಚಾ ನೇಮಕ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮುಂದಿನ ಸುದ್ದಿ
Show comments