ಬೆಂಗಳೂರು: ಈ ವರ್ಷ ಮಳೆಗಾಲ ಮುಗಿಯಿತು ಇನ್ನು ಮಳೆಯ ಸಾಧ್ಯತೆಯಿಲ್ಲ ಎಂದು ನೀವಂದುಕೊಂಡಿದ್ದರೆ ಸುಳ್ಳು. ಈ ವಾರದ ಹವಾಮಾನ ವರದಿ ಏನು ಹೇಳುತ್ತಿದೆ ತಪ್ಪದೇ ಗಮನಿಸಿ.
ಕಳೆದ ವಾರ ಸೈಕ್ಲೋನ್ ಪರಿಣಾಮದಿಂದ ರಾಜ್ಯದ ಬಹುತೇಕ ಕಡೆ ಮಳೆಯಾಗಿತ್ತು. ಈ ವಾರ ಆರಂಭದಲ್ಲಿ ಮಳೆಯ ಸಾಧ್ಯತೆಯಿಲ್ಲ. ಆದರೆ ವಾರದ ಮಧ್ಯಭಾಗದಿಂದ ಅಂದರೆ ಬುಧವಾರದಿಂದ ಮತ್ತೆ ಎರಡು-ಮೂರು ದಿನಗಳ ಕಾಲ ಹಲವೆಡೆ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಉತ್ತರ ಕನ್ನಡ, ಉಡುಪಿ, ಕೊಡಗು, ಮಂಡ್ಯ, ಬೆಂಗಳೂರು, ಚಾಮರಾಜನಗರ, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹಾವೇರಿ, ರಾಯಚೂರು, ಕೊಪ್ಪಳ, ಬೀದರ್, ಬೆಳಗಾವಿ, ಯಾದಗಿರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರದಿಂದ ಅಥವಾ ಇನ್ನು ಕೆಲವೆಡೆ ವಾರಂತ್ಯಕ್ಕೆ ಮಳೆಯ ಸೂಚನೆಯಿದೆ.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಗದಗ, ಬಾಗಲಕೋಟೆ, ದಾವಣಗೆರೆ, ಬಳ್ಳಾರಿ, ವಿಜಯಪುರ, ಕಲಬುರಗಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ವಾರಪೂರ್ತಿ ಬಹುತೇಕ ಬಿಸಿಲಿನ ವಾತಾವರಣವಿರಲಿದೆ.