Webdunia - Bharat's app for daily news and videos

Install App

Karnataka Weather: ಮಳೆ ಬೆನ್ನಲ್ಲೇ ಇಂದಿನಿಂದ ರಾಜ್ಯದ ಜನತೆಗೆ ಶಾಕಿಂಗ್ ಹವಾಮಾನ

Krishnaveni K
ಗುರುವಾರ, 13 ಮಾರ್ಚ್ 2025 (09:38 IST)
ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನಿನ್ನೆ ಮತ್ತು ಮೊನ್ನೆ ಮಳೆಯಾಗಿತ್ತು. ಇದೀಗ ಮಳೆಯ ಬೆನ್ನಲ್ಲೇ ರಾಜ್ಯದ ಜನತೆಗೆ ಇಂದಿನಿಂದ ಶಾಕಿಂಗ್ ಹವಾಮಾನ ಕಾದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊನ್ನೆ ಸಂಜೆ ಸಣ್ಣ ಮಳೆಯಾಗಿತ್ತು. ಪರಿಣಾಮ ನಿನ್ನೆಯೂ ಕೆಲವೆಡೆ ಮೋಡ ಕವಿದ ವಾತಾವರಣ ಮತ್ತು ತಂಪು ಗಾಳಿ ಕಂಡುಬಂದಿತ್ತು. ಇದರಿಂದಾಗಿ ಬಿಸಿಲಿನ ತಾಪ ಕೊಂಚ ಮಟ್ಟಿಗೆ ತಗ್ಗಿತ್ತು.

ನಿನ್ನೆ ಚಾಮರಾಜನಗರ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ, ಮೈಸೂರಿನ ಕೆಲವೆಡೆ ಮಳೆಯಾಗಿತ್ತು. ಪರಿಣಾಮ ಬೆಂಗಳೂರಿನಲ್ಲೂ ಸಂಜೆ ತಂಪು ವಾತಾವರಣವಿತ್ತು. ಆದರೆ ರಾಜ್ಯದ ಉಳಿದ ಕಡೆಗಳಲ್ಲಿ ಬಿರು ಬಿಸಿಲಿನ ವಾತಾವರಣವಿತ್ತು.

ಆದರೆ ಇಂದಿಗೆ ಮಳೆಯ ಮುನ್ಸೂಚನೆಯಿಲ್ಲ. ಬದಲಾಗಿ ಇಂದಿನಿಂದ ತಾಪಮಾನ ವಿಪರೀತ ಏರಿಕೆಯಾಗಲಿದೆ. ಇಂದು ರಾಜ್ಯಾದ್ಯಂತ ಸರಾಸರಿ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟಿರಲಿದೆ. ಇದು ಇನ್ನಷ್ಟು ಏರಿಕೆಯಾಗಲಿದೆ. ಇನ್ನು, ದಕ್ಷಿಣ ಕನ್ನಡದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿಯಷ್ಟಾಗಲಿದೆ. ಬಹುತೇಕ ಮಾರ್ಚ್ ನಲ್ಲಿ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಂಪೇಗೌಡರು ದಕ್ಷ ಆಡಳಿತಗಾರರಾಗಿದ್ದರು: ಸಿದ್ದರಾಮಯ್ಯ

ಆಪರೇಷನ್ ಸಿಂಧು: ಇರಾನ್, ಇಸ್ರೇಲ್‌ನಿಂದ 4,400 ಭಾರತೀಯರು ತಾಯ್ನಾಡಿಗೆ

ಸಂವಿಧಾನದಿಂದ ಜಾತ್ಯಾತೀತ ಕಿತ್ತು ಹಾಕಬೇಕೆಂದ ಆರ್ ಎಸ್ಎಸ್: ಮೋದಿ ಉತ್ತರಿಸಬೇಕು ಎಂದ ಸಿದ್ದರಾಮಯ್ಯ

Viral Video: ಅಹ್ಮದಾಬಾದ್ ನಲ್ಲಿ ರಥಯಾತ್ರೆ ವೇಳೆ ಯದ್ವಾ ತದ್ವಾ ಓಡಿದ ಆನೆ

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

ಮುಂದಿನ ಸುದ್ದಿ
Show comments