Publish Date: Fri, 05 Jun 2020 (09:09 IST)
Updated Date: Fri, 05 Jun 2020 (09:11 IST)
ಬೆಂಗಳೂರು: ಜುಲೈನಲ್ಲಿ ಶಾಲೆ ಆರಂಭಿಸಲು ಪೋಷಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ಆ ಯೋಚನೆಯನ್ನು ಕೈಬಿಟ್ಟಿದೆ. ಆದರೆ ಮಕ್ಕಳ ಪಾಠಕ್ಕೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಕೇರಳದಲ್ಲಿ ಈಗಾಗಲೇ ಪ್ರತ್ಯೇಕ ಚಾನೆಲ್ ನಿರ್ಮಿಸಿ ಸರ್ಕಾರವೇ ಆನ್ ಲೈನ್ ಶಿಕ್ಷಣ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಕೆಲವು ಶಾಲೆಗಳು ತಮ್ಮದೇ ವ್ಯಾಟ್ಸಪ್, ಇತರೆ ಆಪ್ ಮೂಲಕ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಇದೀಗ ಕರ್ನಾಟಕವೂ ಪ್ರತ್ಯೇಕ ಚಾನೆಲ್ ನಿರ್ಮಿಸಿದರೆ ಹೇಗೆ ಎಂಬ ಚಿಂತನೆಯಲ್ಲಿದೆ.
ಪ್ರತ್ಯೇಕ ಚಾನೆಲ್ ನಿರ್ಮಿಸಿ ಆನ್ ಲೈನ್ ಶಿಕ್ಷಣ ನೀಡುವ ಯೋಚನೆಯೂ ಸರ್ಕಾರಕ್ಕಿದೆ. ಈ ಬಗ್ಗೆ ಈಗ ಯೋಜನೆ ಮಾಡಲಾಗುತ್ತಿದೆ.