Select Your Language

Notifications

webdunia
webdunia
webdunia
webdunia

Karnataka Rains: ಇಂದಿನ ಹವಾಮಾನ ವರದಿಯಂತೆ ಈ ಜಿಲ್ಲೆಯವರಿಗೆ ಎಚ್ಚರಿಕೆ ಅಗತ್ಯ

Karnataka Rains

Krishnaveni K

ಬೆಂಗಳೂರು , ಶುಕ್ರವಾರ, 13 ಜೂನ್ 2025 (08:36 IST)
ಬೆಂಗಳೂರು: ಕರ್ನಾಟಕದಲ್ಲಿ ಈಗ ಮುಂಗಾರು ಮಳೆ ಮತ್ತೆ ಬಿರುಸಾಗಿದ್ದು, ಇಂದು ಕೆಲವರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಕೆಲವು ಜಿಲ್ಲೆಯವರು ಇಂದು ಎಚ್ಚರಿಕೆ ವಹಿಸಬೇಕಾಗುತ್ತದೆ.

ರಾಜ್ಯಾದ್ಯಂತ ಈಗ ಮತ್ತೆ ಮಳೆಯಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ನೆರೆ ಭೀತಿ ಎದುರಾಗಿದೆ. ದಕ್ಷಿಣ ಕನ್ನಡದಿಂದ ತೊಡಗಿ ಕಲಬುರಗಿಯವರೆಗೆ ವಿಪರೀತ ಮಳೆಯಾಗುತ್ತದೆ. ಬೆಂಗಳೂರಿನಲ್ಲೂ ದಿನವಿಡೀ ಮೋಡ ಕವಿದ ವಾತಾವರಣ, ಸಣ್ಣ ಮಳೆಯಾಗುತ್ತಿದೆ.


ಇಂದೂ ಕೂಡಾ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯಿದೆ. ಹೀಗಾಗಿ ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು ಜನರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ, ಉತ್ತರದ ಜಿಲ್ಲೆಗಳಲ್ಲೂ ಪ್ರವಾಹ ಸದೃಶ ವಾತಾವರಣವಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು ಜನರು ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಈ ಮಳೆಯ ವಾತಾವರಣ ಇನ್ನೂ ನಾಲ್ಕು ದಿನ ಮುಂದುವರಿಯುವ ನಿರೀಕ್ಷೆಯಿದೆ. ಇಂದು ರಾಜ್ಯದ ಗರಿಷ್ಠ ತಾಪಮಾನ 26 ಡಿಗ್ರಿಯಷ್ಟಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್