Webdunia - Bharat's app for daily news and videos

Install App

ಕರ್ನಾಟಕ ಪೊಲೀಸರ ಬೇಟೆ

Webdunia
ಭಾನುವಾರ, 23 ಜನವರಿ 2022 (14:35 IST)

ಕುಡಿದು ಮತ್ತಿನಲ್ಲಿ ರಸ್ತೆಗೆ ಬಂದು ಕೂಗಾಡುತ್ತಿದ್ದವರನ್ನು ಕಂಡು ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದ ಅಸ್ಸೋಂ ಮೂಲದ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ‌.

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತನಗರದಲ್ಲಿರುವ ಲೇಬರ್ ಶೆಡ್​ನಲ್ಲಿ ಜ.1ರಂದು ಮುರುಗ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ಆಯಂಥೋನಿ ಸಿಂಗ್, ಕಿಶನ್ ಮತ್ತು ರಂಜನ್ ಟರ್ಕಿ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪತಿಯನ್ನು ಕಳೆದುಕೊಂಡ ಪತ್ನಿ ಮಾತು

ಕೊಲೆಯಾಗಿದ್ದ ಮುರುಗ ಸಣ್ಣದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದ. ಅಲ್ಲದೇ, ಏರಿಯಾದಲ್ಲಿ ಗಾರೆ ಕೆಲಸ ಮಾಡುತಿದ್ದ. ಹೀಗಿದ್ದವನು ಇದೇ ಜನವರಿ 1ರಂದು ತಡರಾತ್ರಿ ಭೀಕರವಾಗಿ ಕೊಲೆಯಾಗಿ ಹೋಗಿದ್ದ. ಕಟ್ಟಡದ ಕೆಲಸಕ್ಕೆ ಬಂದ ಆರು ಮಂದಿಯ ಗ್ಯಾಂಗ್ ಕ್ರಿಕೆಟ್ ಬ್ಯಾಟ್​ನಿಂದ ಮುರುಗನ್ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.

ಜ.1ರಂದು ರಾತ್ರಿ ಮನೆಯಲ್ಲಿದ್ದ ಮುರುಗನನ್ನು ಪಕ್ಕದ ಮನೆಯ ಬಾಲಕನೊಬ್ಬ ಕರೆದು ಆಡೋಕೆ ಮನೆಯಲ್ಲಿರುವ ಕ್ರಿಕೆಟ್ ಬ್ಯಾಟ್ ಕೊಡಿ ಎಂದು ಕೇಳಿದ್ದ. ಬಾಲಕ ಕರೆದ ಎಂದು ಅವನ ಜೊತೆ ಬ್ಯಾಟ್ ಹಿಡಿದುಕೊಂಡು ಸಿಗರೇಟು ಸೇದುವುದಕ್ಕೆ ಮನೆಯಿಂದ ಕೂಗಳತೆ ದೂರದ ಅಂಗಡಿ ಕಡೆ ನಡೆದಿದ್ದ. ಬಿಡಾರದಲ್ಲಿದ್ದ ಅಸ್ಸೋಂ ಹುಡುಗರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ರಸ್ತೆಗೆ ಬಂದಿರೋದನ್ನ ಗಮನಿಸಿದ್ದಾನೆ.

ಗಲಾಟೆ ಮಾಡಬೇಡಿ ಎಂದು ಗಟ್ಟಿ ಧ್ವನಿಯಲ್ಲಿ ಅಸ್ಸೋಂ ಹುಡುಗರಿಗೆ ಹೇಳಿದ್ದಾನಷ್ಟೇ.. ಅಷ್ಟಕ್ಕೆ ಅಸ್ಸೋಂ ಹುಡುಗರು ಮುರುಗನ ಕೈಯಲ್ಲಿದ್ದ ಬ್ಯಾಟ್ ಕಸಿದುಕೊಂಡು ಮುರುಗನನ್ನ ಹೊಡೆದು ಸಾಯಿಸೇ ಬಿಟ್ಟಿದ್ದರು. ನಂತರ ಫ್ಲೈಟ್ ಹತ್ತಿ ಅಸ್ಸೋಂಗೆ ತೆರಳಿದ್ರು. ಬೇಟೆಗಿಳಿದ ಪೊಲೀಸರು ಆರು ಜನರ ಪೈಕಿ ಮೂವರನ್ನು ಬಂಧಿಸಿದ್ದಾರೆ.

ಇದು ಒಂದು ಕಡೆ ಆದ್ರೆ, ಮುರುಗ ಪೋಷಕರು ಹೇಳೋದೇ ಬೇರೆ. ಅಪ್ರಾಪ್ತ ಯುವಕ ಮತ್ತು ಮುರುಗನ್ ಮಧ್ಯೆ ಕ್ರಿಸ್ಮಸ್ ಹಬ್ಬದಂದು ಕೇಕ್ ಕಟ್ ಮಾಡೋ ವಿಚಾರಕ್ಕೆ ಜಗಳ ಆಗಿದೆ. ಅದಾಗಿಯೂ ಇಬ್ಬರು ಚೆನ್ನಾಗಿಯೇ‌ ಇದ್ದರು. ಹೀಗಿರುವಾಗ ಆತನೆ ಕರೆದುಕೊಂಡು ಹೋಗಿ ಕೊಲೆ ಮಾಡಿಸಿರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರಾವಳಿಯಲ್ಲಿ ರಣಭೀಕರ ಮಳೆ ನಡುವೆ ಮುಂದಿನ 24ಗಂಟೆ ಹೇಗಿರಲಿದೆ ಗೊತ್ತಾ ಹವಾಮಾನ

ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರಿಗೆ ಕೊನೆಗೂ ಮಂತ್ರಿಸ್ಥಾನ

ಕೊನೆಗೂ ಡಿಕೆ ಶಿವಕುಮಾರ್ ಸಂಪುಟ ಸೇರಿದ 19 ಸಚಿವರು ಇವರೇ

ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧದ ಎಫ್ಐಆರ್ ಹಿಂಪಡೆಯುವ ಬಗ್ಗೆ ದೆಹಲಿ‌ ಕೋರ್ಟ್ ಮಹತ್ವದ ಸೂಚನೆ

ಎಲ್ಲಾ ಶಾಸಕರಿಗೂ ಒಂದೇ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ

ಮುಂದಿನ ಸುದ್ದಿ
Show comments