ರಾಜ್ಯದ ಶಾಸಕರಿಗೆ ವೇತನ, ಭತ್ಯೆ ಎಲ್ಲವೂ ಡಬಲ್: ಜನರಿಗೆ ಮಾತ್ರ ಬೆಲೆ ಏರಿಕೆ ಬರೆ

Krishnaveni K
ಗುರುವಾರ, 20 ಮಾರ್ಚ್ 2025 (14:41 IST)
ಬೆಂಗಳೂರು: ರಾಜ್ಯದ ಎಲ್ಲಾ ಶಾಸಕರಿಗೆ ವೇತನ ಮತ್ತು ದಿನ ಭತ್ಯೆ ಹೆಚ್ಚಳವಾಗಿದೆ. ಆದರೆ ಜನ ಸಾಮಾನ್ಯರಿಗೆ ಮಾತ್ರ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಬರೆ ಎಳೆಯಲಾಗುತ್ತಿದೆ.

ಶಾಸಕರ ವೇತನ, ಭತ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025 ಕಕ್ಕೆ ಅನುಮೋದನೆ ನೀಡಲು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಸದನದಲ್ಲಿ ವಿಧೇಯಕ ಮಂಡನೆಯಾಗಲಿದೆ.

ಪ್ರಸ್ತುತ ಶಾಸಕರಿಗೆ 40,000 ರೂ. ವೇತನವಿದ್ದು ಇನ್ನೀಗ ಇದು ಡಬಲ್ ಆಗಲಿದೆ. ಅಂದರೆ ಶಾಸಕರ ವೇತನ 80,000 ರೂ.ಗಳಾಗಲಿದೆ. ಪಿಂಚಣಿ ಇದುವರೆಗೆ 50,000 ರೂ.ಗಳಿತ್ತು. ಇನ್ನೀಗ 75,000 ರೂ.ಗಳಾಗಲಿವೆ. ಮತ್ತೆ ಆರಿಸಿ ಬಂದರೆ ಇದುವರೆಗೆ 5,000 ಹೆಚ್ಚುವರಿ ವೇತನವಿತ್ತು. ಆದರೆ ಇನ್ನೀಗ 20,000 ರೂ. ಹೆಚ್ಚುವರಿ ಸಂಬಳ ಸಿಗಲಿದೆ. ನಿವೃತ್ತ ಶಾಸಕರ ವೈದ್ಯಕೀಯ ಭತ್ಯೆ ಇದುವರೆಗೆ 5000 ರೂ.ಗಳಿದ್ದರೆ ಇನ್ನೀಗ 20,000 ರೂ.ಗಳಾಗಲಿದೆ.

ಕ್ಷೇತ್ರ ಪ್ರಯಾಣ ಭತ್ಯೆ ರೂಪದಲ್ಲಿ ಇದುವರೆಗೆ 60,000 ರೂ. ಸಿಗುತ್ತಿತ್ತು. ಇನ್ನು ಇದು 80 ಸಾವಿರ ರೂ.ಗೆ ಏರಿಕೆಯಾಗಲಿದೆ. ರೈಲು, ವಿಮಾನ ಪ್ರಯಾಣ ಭತ್ಯೆ ವಾರ್ಷಿಕವಾಗಿ ಇದುವರೆಗೆ 60,000 ರೂ.ಗಳಿತ್ತು ಇನ್ನೀಗ 80,000 ರೂ. ಸಿಗಲಿದೆ. ದೂರವಾಣಿ, ಕ್ಷೇತ್ರ ಭತ್ಯೆ, ಪೋಸ್ಟ್ ವೆಚ್ಚ 85,000 ರೂ. ಸಿಗುತ್ತಿತ್ತು. ಇನ್ನು 1,10,000 ರೂ. ಸಿಗುವುದು. ಆಪ್ತ ಸಹಾಯಕರ ವೇತನ ಭತ್ಯೆ ರೂಪದಲ್ಲಿ ಇದುವರೆಗೆ 20,000 ರೂ. ನೀಡಲಾಗುತ್ತಿತ್ತು. ಇನ್ನೀಗ 25 ಸಾವಿರ ರೂ. ಸಿಗಲಿದೆ.

ಶಾಸಕರ ಭತ್ಯೆ, ವೇತನ ಹೆಚ್ಚಳ ವಿಚಾರ ಹೊರಬರುತ್ತಿದ್ದಂತೇ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಶಾಸಕರಿಗೆ ಮಾತ್ರ ವೇತನ ಡಬಲ್, ಭತ್ಯೆಯೂ ಡಬಲ್. ಜನ ಸಾಮಾನ್ಯರಿಗೆ ಬೆಲೆ ಏರಿಕೆ ಮಾಡಿ ಜೇಬಿಗೆ ಕತ್ತರಿ ಹಾಕುವುದೇ ಆಯ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments