Select Your Language

Notifications

webdunia
webdunia
webdunia
webdunia

Karnataka Budget:ಮುಸ್ಲಿಮರಿಗೆ ಬಂಪರ್, ಹಿಂದೂಗಳಿಗೆ ಚಿಪ್ಪು: ಇದು ಹಲಾಲ್ ಬಜೆಟ್ ಎಂದು ಭಾರೀ ಆಕ್ರೋಶ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 7 ಮಾರ್ಚ್ 2025 (13:43 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಘೋಷಣೆ ಮಾಡಿರುವ ಬಜೆಟ್ ನಲ್ಲಿ ಮುಸ್ಲಿಮರಿಗೆ ಬಂಪರ್ ಕೊಡುಗೆಗಳನ್ನು ನೀಡಿರುವುದಕ್ಕೆ ವಿಪಕ್ಷ ಬಿಜೆಪಿ ಮತ್ತು ಹಿಂದೂಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮುಸ್ಲಿಮರಿಗೆ ಬಂಪರ್, ಹಿಂದೂಗಳಿಗೆ ಚಿಪ್ಪು, ಒಟ್ಟಿನಲ್ಲಿ ಹಲಾಲ್ ಬಜೆಟ್ ಎಂದು ಕಿಡಿ ಕಾರಿದ್ದಾರೆ.

ಮುಸ್ಲಿಮರಿಗೆ ಕೊಡುಗೆಗಳೇನು?
ಈ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ.

-ಮುಸ್ಲಿಮರ ಸರಳ ವಿವಾಹಕ್ಕೆ 50,000 ರೂ. ಪ್ರೋತ್ಸಾಹ ಧನ
-ಮದರಸಾ ಶಿಕ್ಷಣ ಸಂಸ್ಥೆಗಳ ಮೇಲ್ದರ್ಜೆಗೇರಿಸಲು 400 ಕೋಟಿ ರೂ.
-ಸರ್ಕಾರೀ 2 ಕೋಟಿ ವರೆಗಿನ ಕಾಮಗಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
-100 ಉರ್ದು ಶಾಲೆಗಳಿಗೆ ಹೈಟೆಕ್ ಸ್ಪರ್ಶ
-ಉಳ್ಳಾಲದಲ್ಲಿ ಅಲ್ಪಸಂಖ್ಯಾತ ಮಹಿಳಾ ವಸತಿ ಕಾಲೇಜು
-ವಕ್ಫ್ ಖಬರಸ್ತಾನ್ ನಿರ್ವಹಣೆಗೆ 150 ಕೋಟಿ ರೂ.
-ಕೈಗಾರಿಕಾ ಪ್ರದೇಶ ಭೂಮಿ ಹಂಚಿಕೆಯಲ್ಲೂ ಮುಸ್ಲಿಮರಿಗೆ ಶೇ.20 ರಷ್ಟು ಮೀಸಲಾತಿ.
-ಅಲ್ಪಸಂಖ್ಯಾತರು ಇರುವ ಪ್ರದೇಶದಲ್ಲಿ ಹೊಸ ಐಟಿಐ ಕಾಲೇಜು ಸ್ಥಾಪನೆ
-ಬೆಂಗಳೂರಿನಲ್ಲಿ ಹೆಚ್ಚುವರಿ ಹಜ್ ಭವನ ಸ್ಥಾಪನೆ

ಈ ಬಜೆಟ್ ನಲ್ಲಿ ಮುಸ್ಲಿಮರಿಗೆ ಈ ಮಟ್ಟಿಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿರುವುದಕ್ಕೆ ಇದು ಹಲಾಲ್ ಬಜೆಟ್ ಎಂದು ಬಿಜೆಪಿ ಟೀಕೆ ಮಾಡಿದೆ. ಈ ಬಜೆಟ್ ನ್ನು ನೋಡಿದರೇ ಕಾಂಗ್ರೆಸ್ ಮುಸ್ಲಿಮ್ ಓಲೈಕೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇನ್ನು ಹಲವು ನೆಟ್ಟಿಗರೂ ಬಜೆಟ್ ನಲ್ಲಿ ಮುಸ್ಲಿಮರಿಗೆ ನೀಡಿರುವ ಕೊಡುಗೆಗಳ ಬಗ್ಗೆ ಟೀಕೆ ಮಾಡಿವೆ. ಹಿಂದೂಗಳು ದೇವಸ್ಥಾನಕ್ಕೆ ಹೋಗಿ ಹುಂಡಿಗೆ ದುಡ್ಡು ಹಾಕಬೇಕು. ಅದನ್ನು ಕಬಳಿಸಿ ಅಲ್ಪ ಸಂಖ್ಯಾತರ ಜೇಬು ತುಂಬಿಸುವುದು ಅಷ್ಟೇ ಎಂದು ಕೆಲವರು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Budgeet 2025: ಮುಸ್ಲಿಂ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಘೋಷಣೆ