Select Your Language

Notifications

webdunia
webdunia
webdunia
webdunia

Karnataka Budget 2025: ಅನುದಾನವೆಲ್ಲಾ ಮಸ್ಲಿಂ, ಕ್ರಿಶ್ಚಿಯನ್ನರಿಗೆ, ಹಿಂದೂಗಳು ಟ್ಯಾಕ್ಸ್ ಕಟ್ಟಕ್ಕೆ ಮಾತ್ರವಾ: ಆಕ್ರೋಶ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 7 ಮಾರ್ಚ್ 2025 (12:03 IST)
ಬೆಂಗಳೂರು: ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು ಎಂದು ಅವರಿಗೆ ಮಾತ್ರ ಅನುದಾನ ಘೋಷಣೆ, ಹಿಂದೂಗಳು ಟ್ಯಾಕ್ಸ್ ಕಟ್ಟಲು ಮಾತ್ರವಾ? ಹೀಗಂತ ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಈ ಸಾಲಿನ ಬಜೆಟ್ ನಲ್ಲಿ ಮಸ್ಲಿಂ, ಕ್ರಿಶ್ಚಿಯನ್, ಜೈನ ಸೇರಿದಂತೆ ಇತರೆ ಸಮುದಾಯಗಳಿಗೆ ಪ್ರತ್ಯೇಕವಾಗಿ ಅನುದಾನ ಘೋಷಣೆ ಮಾಡಿದ್ದಾರೆ. ಆದರೆ ಹಿಂದೂಗಳಿಗೆ ಪ್ರತ್ಯೇಕವಾಗಿ ಅನುದಾನ ಘೋಷಣೆ ಮಾಡಿಲ್ಲ.

ಮುಸ್ಲಿಮರ ಸ್ಮಶಾನ, ವಕ್ಫ್ ಆಸ್ತಿ ರಕ್ಷಣೆಗೆ 150 ಕೋಟಿ ರೂ., ಕ್ರಿಶ್ಚಿಯನ್ನರ ಅಭಿವೃದ್ಧಿಗೆ 250 ಕೋಟಿ ರೂ., ಜೈನ, ಬೌದ್ಧ, ಸಿಖ್ ಸಮುದಾಯದ ಅಭಿವೃದ್ಧಿಗೆ 100 ಕೋಟಿ ರೂ. ಘೋಷಣೆ ಮಾಡಲಾಗಿದೆ. ಆದರೆ ಹಿಂದೂಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿಲ್ಲ.

ಇದರ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳು ಟ್ಯಾಕ್ಸ್ ಕಟ್ಟಕ್ಕೆ ಬೇಕು. ಆದರೆ ಯಾವುದೇ ಅನುದಾನ ಇಲ್ಲ. ನಿಮಗೆ ವೋಟ್ ಹಾಕಕ್ಕೆ ಹಿಂದೂಗಳು ಬೇಕು, ಅನುದಾನ ಯಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Budget live: ಮುಸ್ಲಿಂ ಸ್ಮಶಾನ ಮತ್ತು ವಕ್ಫ್ ಆಸ್ತಿ ರಕ್ಷಣೆಗೆ 150 ಕೋಟಿ ಕೊಡುಗೆ ಕೊಟ್ಟ ಸಿದ್ದರಾಮಯ್ಯ