Publish Date: Mon, 13 Jul 2026 (11:30 IST)
Updated Date: Mon, 13 Jul 2026 (11:33 IST)
ಬೆಂಗಳೂರು: ಸ್ಟೇಜ್ ಇದ್ರೆ ಮಾತ್ರ ಪ್ರಾಬ್ಲಮ್ಸ್ ರಿಸೀವ್ ಎಂದು ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮೂಲಕ ಸಿಎಂ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದೆ.
ಸಿಎಂ ಡಿಕೆ ಶಿವಕುಮಾರ್ ಗಾಗಿ ಕೆಲವು ಜನರು ಅಹವಾಲು ನೀಡಲು ಗುಂಪು ಕಟ್ಟಿ ನಿಂತಿದ್ದರು. ಅವರನ್ನು ಸಿಎಂ ಭೇಟಿ ಮಾಡಲು ಅಲ್ಲಿಯೇ ಒಂದು ಸಣ್ಣ ಸ್ಟೇಜ್ ಹಾಕಲಾಗಿತ್ತು. ಇದಕ್ಕೆ ಬಿಜೆಪಿ ವ್ಯಂಗ್ಯ ಮಾಡಿದ್ದು ವಿಡಿಯೋ ಹಂಚಿಕೊಂಡು ಕಾಲೆಳೆದಿದೆ.
ಜನರ ಕಷ್ಟ ಆಲಿಸುವುದಕ್ಕೂ ಎತ್ತರದ ಸ್ಟೇಜ್ ಬೇಕು! ಕ್ಯಾಮರಾ ಕಣ್ಣಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಮಾತ್ರ ಎತ್ತರದಲ್ಲಿ, ಗಾಂಭೀರ್ಯದಿಂದ ಕಾಣಬೇಕು. ಆದರೆ, ಸಾಮಾನ್ಯ ಜನರು ಮತ್ತು ಅವರ ಸಮಸ್ಯೆಗಳು ಮಾತ್ರ ಕ್ಯಾಮರಾ ಫೋಕಸ್ನಿಂದ ಹೊರಗಿರಬೇಕು. ಇದು ಜನರ ಅಹವಾಲು ಸ್ವೀಕಾರವೋ ಅಥವಾ ಫೋಟೋಶೂಟ್ ಪ್ರದರ್ಶನವೋ? ಎಂದು ಬಿಜೆಪಿ ಟಾಂಗ್ ಕೊಟ್ಟಿದೆ. ಈ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ