Select Your Language

Notifications

webdunia
webdunia
webdunia
Tuesday, 8 April 2025
webdunia

ಕಪ್ಪತ್ತಗುಡ್ಡ ವನ್ಯಜೀವಿಧಾಮ ಘೋಷಣೆ ವಿಚಾರ; 14 ಕಲ್ಲಿನ ಕ್ವಾರಿಗಳ ಸ್ಥಗಿತಕ್ಕೆ ನೋಟಿಸ್

ಗದಗ
ಗದಗ , ಮಂಗಳವಾರ, 29 ಸೆಪ್ಟಂಬರ್ 2020 (10:31 IST)
ಗದಗ : ಕಪ್ಪತ್ತಗುಡ್ಡ ವನ್ಯಜೀವಿಧಾಮ ಘೋಷಣೆ ವಿಚಾರ 14 ಕಲ್ಲಿನ ಕ್ವಾರಿಗಳನ್ನು ತಕ್ಷಣ ಸ್ಥಗಿತ ಮಾಡಲು ನೋಟಿಸ್ ನೀಡಲಾಗಿದೆ.

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶದ ಹಿನ್ನಲೆಯಲ್ಲಿ  ಗಣಿ ಇಲಾಖೆಯಿಂದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ವ್ಯಾಪ್ತಿಯ 14 ಕಲ್ಲಿನ ಕ್ವಾರಿ ಸ್ಥಗಿತಕ್ಕೆ ನೋಟಿಸ್ ನೀಡಲಾಗಿದೆ. ಕಪ್ಪತ್ತಗುಡ್ಡ ವನ್ಯಜೀವಿಧಾಮದ 1 ಕಿ.ಮೀ. ವ್ಯಾಪ್ತಿಯಲ್ಲಿ ಈ ಕ್ವಾರಿ ಬರಲಿದೆ.

ಗಣಿ ಇಲಾಖೆ ಅನುಮತಿ ಪಡೆದಿದ್ದ ಕಲ್ಲು ಗಣಿ ಮಾಲೀಕರು  ಈಗ ನೋಟಿಸ್ ಹಿನ್ನಲೆಯಲ್ಲಿ ಕಂಗಾಲಾಗಿದ್ದಾರೆ. ಅಲ್ಲದೇ ಕಲ್ಲು ಗಣಿ ಉಳಿಸಿಕೊಳ್ಳಲು  ಲಾಬಿ ನಡೆಸುತ್ತಿರುವ ಆರೋಪ  ಕೇಳಿಬಂದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ; ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿ ಪತ್ರ ಬರೆದ ಸುರೇಶ್ ಕುಮಾರ್