Webdunia - Bharat's app for daily news and videos

Install App

ರಾಜ್ಯದ ಪ್ರಪ್ರಥಮ ಸ್ಕಿನ್​ ಬ್ಯಾಂಕ್​ಗೆ ಎದುರಾಯ್ತು ಕಂಟಕ

Webdunia
ಬುಧವಾರ, 22 ಮಾರ್ಚ್ 2023 (19:03 IST)
ರೋಗಿಗಳ ಅವಶ್ಯಕತೆಗೆ ತಕ್ಕಂತೆ ಚರ್ಮದ ದಾಸ್ತಾನು ಇಲ್ಲ.ಸುಟ್ಟಗಾಯಗಳಿಂದ ಬಳಲಿ ಬಂದವರಿಗೆ ಸಂಜೀವಿನಿಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೀಗ ಚರ್ಮನಿಧಿಗೆ ಚರ್ಮದ ಕೊರತೆ ಎದುರಾಗಿದೆ .2016 ರಲ್ಲಿ ಆರಂಭವಾದ ರಾಜ್ಯದ ಪ್ರಪ್ರಥಮ ಚರ್ಮನಿಧಿ ಇದು.ಇದೀಗ ರೋಗಿಗಳಿಗೆ ಸಾಕಾಗುವಷ್ಟು ಚರ್ಮ ಸ್ಟಾಕ್​ ಇಲ್ಲದೇ ಇರೋದು ವೈದ್ಯರಿಗೆ ಆತಂಕ ಉಂಟುಮಾಡಿದೆ.
 
ಬೇಸಿಗೆ ಆರಂಭದಲ್ಲೇ ಚರ್ಮದ ಕೊರತೆ ಎದುರಾಗಿರೋದು ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.ಬೆಂಕಿ ಅವಘಡಗಳು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೀಡಲು ಚರ್ಮದ ಕೊರತೆ ಇದೆ ಅಂತಾ ಸ್ಕಿನ್​ ಬ್ಯಾಂಕ್​ ವೈದ್ಯರ ತಂಡ ಕಳವಳ ವ್ಯಕ್ತಪಡಿಸಿದೆ. ಚರ್ಮದಾನಿಗಳು ಇಳಿಕೆಯಾಗ್ತಿರೋದು, ಸಂಗ್ರಹಿಸಿದ ಚರ್ಮವನ್ನ ಬಳಕೆಗೆ ಯೋಗ್ಯ ಮಾಡುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತಿರುವುದು ಚರ್ಮದ ಕೊರತೆಗೆ ಕಾರಣವಾಗಿದೆ.ಇನ್ನು ವ್ಯಕ್ತಿ ಸತ್ತ ಬಳಿಕ 6 ಗಂಟೆಯ ಒಳಗೆ ಚರ್ಮ ಸಂಗ್ರಹ ಮಾಡಬೇಕು.ಈ ವೇಳೆ ಹಲವರಿಗೆ  ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರೋದು ಕೂಡ ಚರ್ಮದ ಅಭಾವಕ್ಕೆ ಕಾರಣವಾಗಿದೆ.ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರೋದರಿಂದ ದಾನಿಗಳ ಸಂಖ್ಯೆ ಕೂಡ ಇಳಿಮುಖವಾಗ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raguvamshi murder: ಮಗನಂತೇ ನಾಟಕವಾಡಿ, ರಘುವಂಶಿ ಸಾವಿನ ದಿನ ತಬ್ಬಿ ಸಾಂತ್ವನಿಸಿದ್ದ ಆರೋಪಿ ರಾಜ್

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನದ ದರ ಇಂದು ಮತ್ತಷ್ಟು ಕಡಿಮೆ

ಮುಂದಿನ ಸುದ್ದಿ
Show comments