Select Your Language

Notifications

webdunia
webdunia
webdunia
webdunia

ಕೆನಡಾ ಸಂಸತ್​​ನಲ್ಲಿ ಕನ್ನಡ ಕಹಳೆ

ಕೆನಡಾ ಸಂಸತ್​​ನಲ್ಲಿ ಕನ್ನಡ ಕಹಳೆ
bangalore , ಶುಕ್ರವಾರ, 20 ಮೇ 2022 (21:03 IST)
ಹೊರ ದೇಶದ ಸಂಸತ್​​ನಲ್ಲಿ ಮೊದಲ ಬಾರಿಗೆ ಕನ್ನಡ ಕಹಳೆ ಮೊಳಗಿದೆ..ಕೆನಡಾ ಪಾರ್ಲಿಮೆಂಟ್​​ನಲ್ಲಿ ಸಂಸತ್ ಸದಸ್ಯ ರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿ ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ..
ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಕೆನಡಾ ಪಾರ್ಲಿಮೆಂಟ್​​ನಲ್ಲಿ ಮಾತನಾಡಿದ್ದಾರೆ..ಇದೇ ಮೊದಲ ಬಾರಿಗೆ ವಿದೇಶಿ ಪಾರ್ಲಿಮೆಂಟ್​​ನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದರು. ಈ ಮೂಲಕ ಕೆನಡಾದ ಪಾರ್ಲಿಮೆಂಟ್​​ನಲ್ಲಿ ಕನ್ನಡದ ಕಹಳೆ ಮೊಳಗಿದೆ. ಈ ಸುಂದರ ಭಾಷೆಗೆ ಸುದೀರ್ಘ
ಇತಿಹಾಸ ಇದೆ. ಕನ್ನ ಡ ಭಾಷೆಯನ್ನು 5 ಕೋಟಿ ಜನರು ಮಾತನಾಡುತ್ತಾರೆ ಎಂದು ಅವರು ಹೇಳಿದರು..ಅಲ್ಲದೇ, ತುಮಕೂರು ಜಿಲ್ಲೆ ದ್ವಾರಾಳು ಗ್ರಾಮದ ವ್ಯಕ್ತಿ ಕೆನಡಾ ಸಂಸತ್ ಸದಸ್ಯನಾಗಿ ಕನ್ನಡ ಮಾತನಾಡುವುದು ಕನ್ನಡಿಗರ ಹೆಮ್ಮೆಯ ವಿಚಾರವಾಗಿದೆ..ಇನ್ನು, ಕುವೆಂಪು ರಚನೆಯ ಮತ್ತು ಡಾ.ರಾಜ್​ಕುಮಾರ್ ಹಾಡಿರುವ ‘ಎಲ್ಲಾದರೂಇರು, ಎಂತಾದರೂಇರು, ಎಂದೆಂದಿಗೂನೀ ಕನ್ನಡವಾಗಿರು’ ಎಂಬ ಹಾಡು ಹಾಡುವ ಮೂಲಕ ಕೆನಡಾ ಸಂಸತ್ನಲ್ಲಿ ಚಂದ್ರ ಆರ್ಯ ತಮ್ಮ ಭಾಷಣ ಮುಗಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

5 ಮಂದಿ ಆರೋಪಿಗಳು ಅರೆಸ್ಟ್​