Select Your Language

Notifications

webdunia
webdunia
webdunia
webdunia

ಕನ್ನಡ ರಾಜ್ಯೋತ್ಸವ: ಇಂದು ಪ್ರಶಸ್ತಿ ವಿತರಣೆ ಎಷ್ಟು ಗಂಟೆಗೆ, ಎಲ್ಲಿ ಇಲ್ಲಿದೆ ಮಾಹಿತಿ

Kannada flag

Krishnaveni K

ಬೆಂಗಳೂರು , ಶನಿವಾರ, 1 ನವೆಂಬರ್ 2025 (08:50 IST)
ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ. ಈ ದಿನದಂದು ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಇದು ಎಷ್ಟು ಗಂಟೆಗೆ, ಎಲ್ಲಿ ನಡೆಯಲಿದೆ ಇಲ್ಲಿದೆ ಮಾಹಿತಿ.

1956 ರಲ್ಲಿ ಮೈಸೂರು ಸಂಸ್ಥಾನವು ಕರ್ನಾಟಕವೆಂದು ರೂಪುಗೊಂಡಿದ್ದು ಇದೇ ದಿನ. ಈ ಕಾರಣಕ್ಕೆ ಪ್ರತೀ ವರ್ಷ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.  ದಸರಾ ನಾಡಹಬ್ಬವಾಗಿದ್ದರೆ, ರಾಜ್ಯೋತ್ಸವ ಕನ್ನಡದ ಹಬ್ಬವಾಗಿದೆ.

ಇನ್ನು, ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡದ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳ ಒಟ್ಟು 70 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಅವರಿಗೆ ಇಂದು ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ವಿತರಿಸಲಿದ್ದಾರೆ.

ಇಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಪ್ರಶಸ್ತಿ ವಿಜೇತರನ್ನು  ವೇದಿಕೆಯಲ್ಲಿ ಕೂರಿಸಿ ಸನ್ಮಾನಿಸಿ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ. ನಟ ಪ್ರಕಾಶ್ ರಾಜ್, ಸೂಲಗಿತ್ತಿ ಈರಮ್ಮ, ಕೋಣಂದೂರು ಲಿಂಗಪ್ಪ, ರಹಮತ್ ತರೀಕೆರೆ ಸೇರಿದಂತೆ ಅನೇಕ ಸಾಧಕರನ್ನು ಇಂದು ಸಿಎಂ ಸನ್ಮಾನಿಸಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ವಾರಂತ್ಯಕ್ಕೆ ಮಳೆಯ ಬಗ್ಗೆ ಇಲ್ಲಿದೆ ಮಹತ್ವದ ಅಪ್ ಡೇಟ್